ಜೆಸಿಐ ಜನ್ನಾಪುರ ಸಮೃದ್ಧಿ ಹಾಗೂ ಶ್ರೀ ನಾರಾಯಣ ಗುರು ಮಹಾಗಣಪತಿ ಮಲೆಯಾಳಂ ಸೇವಾ ಸಮಿತಿ, ವಿಷನ್ ಸ್ಪ್ರಿಂಗ್ ಸಂಸ್ಥೆ ವತಿಯಿಂದ ಶುಕ್ರವಾರ ಜನ್ನಾಪುರ ವರ್ತಕರ ಭವನದಲ್ಲಿ ಸಾರ್ವಜನಿಕರಿಗೆ ಉಚಿತ ಕಣ್ಣಿನ ಪರೀಕ್ಷೆ ನಡೆಸಲಾಯಿತು ಹಾಗೂ ಉಚಿತ ಕನ್ನಡಕವನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಜೆಸಿಐ ನ ಅಧ್ಯಕ್ಷರಾದ ವಿನಯ್ .ಬಿ.ಎಮ್, ಕಾರ್ಯದರ್ಶಿ ಪ್ರಹ್ಲಾದ್ , ಸಂತೋಷ್, ಭರತ್, ವಿಶ್ವಾಸ್, ಚರಣ್ ಚಿರಾಗ್, ನಿಕ್ಷೇಪ್ , ಶ್ರೇಯಸ್, ನಚಿಕೇತ್, ವೀರೇಂದ್ರ, ತೇಜೇಶ್, ಬ್ರಹ್ಮಶ್ರಿ ನಾರಾಯಣ ಗುರು ಮಲೆಯಾಳಂ ಸಂಘದ ತಾಲೂಕು ಅಧ್ಯಕ್ಷರಾದ ಮಹೇಶ್, ಘಟಕ ಅಧ್ಯಕ್ಷರಾದ ಮಂಜುನಾಥ್ ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.
ವಿಷನ್ ಸ್ಪ್ರಿಂಗ್ ಸಂಸ್ಥೆಯ ಸಹಯೋಗದಲ್ಲಿ ನುರಿತ ನೇತ್ರ ತಜ್ಞರು ನೇತ್ರ ಪರೀಕ್ಷೆಯನ್ನು ನಡೆಸಿಕೊಟ್ಟರು.