ಕಳಸ ಸಮೀಪದ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದ್ದಾಗಲೂ ಜೀಪ್ ಚಾಲನೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಜೀಪ್ ವಶಪಡಿಸಿಕೊಂಡ ಕಳಸ ಪೊಲೀಸರು
ಚಾಲಕ ಪವನ್ ಕುಮಾರ್ ವಿರುದ್ದ ಪ್ರಕರಣ ದಾಖಲು
ಬಿ.ಎನ್.ಎಸ್. 281 ಅಡಿಯಲ್ಲಿ ಪ್ರಕರಣ ದಾಖಲು
ಬ್ಯಾರಿಕೇಡ್ ಹಾಕಿ ನಿರ್ಬಂಧ ಹೇರಿದ್ರು ಸಹ ಸೇತುವೆ ಮೇಲೆ ಜೀಪ್ ಚಲಾಯಿಸಿದ್ದ ಚಾಲಕ. ಸೇತುವೆ ದಾಟುವಾಗ ಜೀಫ್ ಮಗುಚುವ ಹಂತಕ್ಕೆ ಹೋಗಿ ಅದೃಷ್ಟದಿಂದ ಪಾರಾಗಿದ್ದ ಚಾಲಕ. ಅದರ ವಿಡಿಯೋ ಸಹಿತ ನಿನ್ನೆ ಮಾಧ್ಯಗಳಲ್ಲಿ ಸುದ್ದಿಯಾಗಿತ್ತು.
ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ರು ಅದರಲ್ಲೇ ಜೀಪ್ ಚಾಲನೆ ಮಾಡಿದ್ದ ಚಾಲಕ
ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆಯಲ್ಲಿ ಗುರುವಾರ ಘಟನೆ ನಡೆದಿತ್ತು.