ಮೂಡಿಗೆರೆಗೆ ನೂತನ ತಹಸೀಲ್ದಾರ್ ಆಗಿ ರಾಜಶೇಖರ ಮೂರ್ತಿಯವರು ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಹಿಂದಿನ ತಹಸೀಲ್ದಾರ್ ಶೈಲೇಶ್ ಎಸ್ ಪರಮಾನಂದ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ರಾಜಶೇಖರ ಮೂರ್ತಿಯವರು ಅಧಿಕಾರ ವಹಿಸಿಕೊಂಡಿದ್ದಾರೆ.
ಮೂಲತಃ ಚಾಮರಾಜನಗರದವರಾದ ರಾಜಶೇಖರ ಮೂರ್ತಿಯವರು ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಪೋರ್ಸ್ (BMTF) ನಲ್ಲಿ ಅಧಿಕಾರಿಯಾಗಿದ್ದರು. ಅದಕ್ಕು ಮುನ್ನ ಬ್ರಹ್ಮಾವರ, ಮುಳಬಾಗಿಲು ಮತ್ತು ಮೈಸೂರಿನಲ್ಲಿ ಕಾರ್ಯನಿರ್ವಹಿಸಿದ್ದರು.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ ರಾಜಶೇಖರ ಮೂರ್ತಿಯವರು ಮೂಡಿಗೆರೆ ತಾಲೂಕು ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಯಾವುದೇ ಅನಾವಶ್ಯಕ ವಿಳಂಬ, ಲೋಪದೋಷಕ್ಕೆ ಆಸ್ಪದ ನೀಡದೇ ಆದ್ಯತೆಯ ಮೇಲೆ ಕೆಲಸ ಮಾಡಲಾಗುವುದು ಮತ್ತು ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರು ಮುಕ್ತವಾಗಿ ತಮ್ಮನ್ನು ಭೇಟಿಯಾಗಬಹುದು, ಕಾನೂನು ನಿಯಮಗಳ ವ್ಯಾಪ್ತಿಯಲ್ಲಿ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತವನ್ನು ಚುರುಕುಗೊಳಿಸುವುದಾಗಿ ತಿಳಿಸಿದ್ದಾರೆ.