ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ತರುವೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಟೋ ಸಂಘದ ಮಾಜಿ ಅಧ್ಯಕ್ಷ ದಿವಂಗತ ಎ.ಎಸ್.ನಾಗೇಶ್ ಸ್ಮರಣಾರ್ಥ ಪೂರ್ಣಚಂದ್ರ ಸ್ವಸಹಾಯ ಸಂಘ,ಆಟೋ ಸಂಘ,ತರುವೆ ಗ್ರಾ.ಪಂ.ಸಹಯೋಗದಲ್ಲಿ ಮಿಷನ್ ಸ್ಪ್ರಿಂಗ್ ಸಂಸ್ಥೆಯ ವತಿಯಿಂದ ಉಚಿತ ನೇತ್ರಾ ತಪಾಸಣೆ ಮತ್ತು ಕನ್ನಡಕ ವಿತರಣೆ ಶಿಬಿರ ನಡೆಸಲಾಯಿತು.
ಕೊಟ್ಟಿಗೆಹಾರ, ತರುವೆ, ಬಿನ್ನಡಿ,ದೇವನಗೂಲ್ ಗ್ರಾಮದ 70ಕ್ಕೂ ಅಧಿಕ ಜನರು ಉಚಿತ ನೇತ್ರ ತಪಾಸಣೆ ಮಾಡಿ ಕನ್ನಡಕ ಪಡೆದರು.ಹೆಚ್ಚು ಕಣ್ಣಿನ ತೊಂದರೆಯಿದ್ದವರಿಗೆ ವಾರದೊಳಗೆ ಕನ್ನಡ ವಿತರಿಸುತ್ತೇವೆ ಎಂದು ವೈದ್ಯೆ ಡಾ.ವಿದ್ಯಾ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಜಯಪಾಲ್,ನೇತ್ರಾ ತಪಾಸಣಾ ಸಿಬ್ಬಂದಿ ಮಾನಸ, ತರುವೆ ಗ್ರಾ.ಪಂ.ಅಧ್ಯಕ್ಷ ಬಿ.ಎಂ.ಸತೀಶ್, ಸದಸ್ಯ ಎ.ಎನ್.ರಘು,ಆಟೋ ಸಂಘದ ಅಧ್ಯಕ್ಷ ಮಹೇಶ್,ಪ್ರಭಾಕರ್ ಬಿನ್ನಡಿ,ಎ.ಆರ್.ಲೋಬೊ,ಮುನೀರ್,ಸಾದಿ ಕ್,ಬಾಳೂರು ಮಹೇಶ್,ದೇವೇಂದ್ರ,ಕಿರಣ್,ತನುಕೊಟ್ಟಿ ಗೆಹಾರ,ನಾರಾಯಣ್ ಗೌಡ, ಮತ್ತಿತರರು ಇದ್ದರು.