ಚಿಕ್ಕಮಗಳೂರು ಜಿಲ್ಲೆಯ ಮೂವರು ಸಹಾಯಕ ಸಬ್ ಇನ್ಸ್ ಪೆಕ್ಟರ್ (ಎಎಸ್ಐ) ಗಳು ಸೇವೆಯಿಂದ ವಯೋನಿವೃತ್ತಿ ಹೊಂದಿದ್ದಾರೆ.
ಈ ಹಿನ್ನಲೆಯಲ್ಲಿ ನಿವೃತ್ತಿ ಹೊಂದಲಿರುವ ಬಿ ಎ ವೆಂಕಟೇಶಮೂರ್ತಿ, ASI, ಮೂಡಿಗೆರೆ ಪೊಲೀಸ್ ಠಾಣೆ, ಎಸ್ ಹನುಮಂತಪ್ಪ, ASI, ಯಗಟಿ ಪೊಲೀಸ್ ಠಾಣೆ ಮತ್ತು ಎಂ ರಂಗಯ್ಯ, ASI, ಸಖರಾಯಪಟ್ಟಣ ಪೊಲೀಸ್ ಠಾಣೆ ರವರನ್ನು ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಇತ್ತೀಚೆಗೆ ಚಿಕ್ಕಮಗಳೂರು ಎಸ್ಪಿ ಕಛೇರಿಯಲ್ಲಿ ಪೊಲೀಸ್ ಅಧೀಕ್ಷಕರು ಸನ್ಮಾನಿಸಿ, ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿದರು.
ಬಿ ಎ ವೆಂಕಟೇಶಮೂರ್ತಿ, ASI ರವರು 30.07.1992 ರಂದು ಇಲಾಖೆಗೆ ಸೇರಿ 31 ವರ್ಷ 10 ತಿಂಗಳು. ಎಸ್ ಹನುಮಂತಪ್ಪ, ASI ರವರು ದಿನಾಂಕ 30.07.1988 ರಂದು ಪೊಲೀಸ್ ಇಲಾಖೆಗೆ ಸೇರಿ 35 ವರ್ಷ 11 ತಿಂಗಳು ಮತ್ತು ಎಂ ರಂಗಯ್ಯ, ASI ರವರು 30.07.1992 ರಂದು ಇಲಾಖೆಗೆ ಸೇರಿ 31 ವರ್ಷ 11 ತಿಂಗಳು ಸೇವೆ ಸಲ್ಲಿಸಿರುತ್ತಾರೆ.