ಜೇಸಿಐ ಮೂಡಿಗೆರೆ ಘಟಕವು ಜೇಸಿಐ ವಲಯ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಹಲವು ಪ್ರಶಸ್ತಿಗಳನ್ನು ಗಳಿಸಿಕೊಂಡಿದೆ ಎಂದು ಘಟಕದ ಅಧ್ಯಕ್ಷ ಸುಪ್ರೀತ್ ಕಾರಬೈಲ್ ತಿಳಿಸಿದ್ದಾರೆ.
ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದಂತಹ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಮೂಡಿಗೆರೆ ಘಟಕದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು. ಕಳೆದ ಆರು ತಿಂಗಳಿನಿಂದ ಘಟಕವು ಹಮ್ಮಿಕೊಂಡಿರುವ ವಿವಿಧ ಸಮಾಜಮುಖಿ ಸಾರ್ವಜನಿಕ ಕಾರ್ಯಗಳನ್ನು ಪರಿಗಣಿಸಿ ಘಟಕಕ್ಕೆ ಒಟ್ಟು 5 ಪ್ರಶಸ್ತಿಗಳನ್ನು ನೀಡಲಾಗಿದೆ. ವಲಯದ ಅತ್ಯುತ್ತಮ ಅಧ್ಯಕ್ಷ ಪ್ರಥಮ ಪ್ರಶಸ್ತಿಯನ್ನು ಸುಪ್ರೀತ್ ಕಾರಬೈಲ್ ಪಡೆದಿದ್ದಾರೆ. ವಲಯದ ಅತ್ಯುತ್ತಮ ಕಾರ್ಯದರ್ಶಿ ದ್ವಿತೀಯಾ ಸ್ಥಾನವನ್ನು ದೀಕ್ಷಿತ್ ಕಣಚೂರು ಪಡೆದಿದ್ದಾರೆ. ಅಲ್ಲದೇ ಘಟಕವು outstanding programming, zd management 2 place, 100% efficiency 2nd place ಪಡೆದಿರುತ್ತಾರೆ.
ಜೇಸಿಐ ಮೂಡಿಗೆರೆ ಘಟಕವು ಕಳೆದ ಆರು ತಿಂಗಳಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಪ್ರಮುಖವಾಗಿ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಕೃಷಿಕರಿಗೆ ಮಾಹಿತಿ, ವಿದ್ಯಾರ್ಥಿಗಳಿಗೆ ತರಬೇತಿ, ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ ಸನ್ಮಾನ, ಸ್ವಚ್ಚತಾ ಆಂದೋಲನ, ಪರಿಸರ ಜಾಗೃತಿ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಮುಂದಿನ ಅವಧಿಯಲ್ಲಿಯೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲು ತಯಾರಿ ನಡೆಸಲಾಗಿದೆ. ಇದೀಗ ನಮ್ಮ ಕಾರ್ಯಕ್ರಮಗಳನ್ನು ಗುರುತಿಸಿ ವಲಯ ಮಟ್ಟದಲ್ಲಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಎಂದು ಮೂಡಿಗೆರೆ ಜೇಸಿಐ ಘಟಕದ ಅಧ್ಯಕ್ಷ ಸುಪ್ರೀತ್ ಕಾರಬೈಲ್ ತಿಳಿಸಿದ್ದಾರೆ.
ದೇವನಹಳ್ಳಿ ಜೇಸಿಐ ಘಟಕದ ವತಿಯಿಂದ ಜೂನ್ 23 ರಂದು ಮಧ್ಯವಾರ್ಷಿಕ ಸಮ್ಮೇಳನ ಆಯೋಜನೆಗೊಂಡಿತ್ತು. ಸಮ್ಮೇಳನದ ಅಧ್ಯಕ್ಷತೆಯನ್ನು ಮೂಡಿಗೆರೆ ಜೇಸಿಐ ಘಟಕದ ಪೂರ್ವಾಧ್ಯಕ್ಷರು ಮತ್ತು ವಲಯ ಉಪಾಧ್ಯಕ್ಷರಾಗಿ ವಿದ್ಯಾರಾಜು ಅವರು ವಹಿಸಿದ್ದರು.