ಮೂಡಿಗೆರೆ ತಾಲೂಕಿನಲ್ಲಿ ಕಳೆದ 3 ದಿನದಿಂದ ಬಿಡದೇ ಮಳೆ ಸುರಿಯುತ್ತಿದ್ದು, ಶನಿವಾರ ಬೆಳಗ್ಗೆ ಸುರಿದ ಮಳೆಯಿಂದಾಗಿ ಮೂಡಿಗೆರೆ ಗೆಂಡೇಹಳ್ಳಿ ಬೇಲೂರು ರಸ್ತೆಯ ಬೊಮ್ಮೇನಹಳ್ಳಿ ಸಮೀಪ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಕೆಲ ಸಮಯ ವಾಹನ ಸಂಚಾರ ಹಾಗೂ ವಿದ್ಯುತ್ ಕಡಿತಗೊಂಡಿತ್ತು.
ಕೂಡಲೇ ಕನ್ನಾಪುರದ ಸುಂದ್ರೇಶ್ ಅವರು ಸಂಬಂಧಿಸಿ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ, ತಲಗೂಡಿನ ಗಿರೀಶ್, ಬೊಮ್ಮನಹಳ್ಳಿಯ ಮಂಜುನಾಥ್, ಜವರಯ್ಯ, ಗುರು, ಉಮೇಶ್ಗೌಡ, ಕನ್ನಾಪುರದ ಮೋಹನ್, ಶ್ರೀನಿವಾಸ್ ಹಾಗೂ ವಾಹನ ಚಾಲಕರು ಮರವನ್ನು ಕತ್ತರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಅಲ್ಲದೇ ವಿದ್ಯುತ್ ತಂತಿ ಮೇಲೆ ಮರ ಬಿದಿದ್ದರಿಂದ ವಿದ್ಯುತ್ ಕಡಿತಗೊಂಡಿದ್ದು. ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಿದ್ಯುತ್ ತಂತಿಗಳನ್ನು ಸರಿಪಡಿಸಿದರು.