ಮೂಡಿಗೆರೆ ಗೋಣಿಬೀಡು ಹೋಬಳಿ ಜಿ. ಹೊಸಳ್ಳಿ ಗ್ರಾಮದಲ್ಲಿ ಮೇ 16 ರಂದು ಸುರಿದ ಬಾರಿ ಮಳೆಗೆ ಮನೆಯೊಂದು ಬಿದ್ದು ಸಂಪೂರ್ಣ ಹಾನಿಯಾಗಿದೆ.
ಜಿ. ಹೊಸಳ್ಳಿ ಗ್ರಾಮದ ದಿ. ಕೆ ಬಿ ರಮೇಶ್ ಮತ್ತು ಲಕ್ಷ್ಮಮ್ಮ ಇವರಿಗೆ ಸೇರಿದ ಮನೆ ಕುಸಿದಿದ್ದು ಸಂಪೂರ್ಣ ಹಾನಿಯಾಗಿರುತ್ತದೆ. ಈ ವಿಷಯ ತಿಳಿದ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರಾದ ದೀಪಕ್ ಹೆಚ್, ಬಿ ಮತ್ತು ರಘು ಅವರು ಸ್ಥಳಕ್ಕೆ ಆಗಮಿಸಿ ಕೂಡಲೇ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳಾದ ಸಚಿನ್ ಅವರನ್ನು ಕರೆಸಿ ಸ್ಥಳ ಪರಿಶೀಲನೆ ಮಾಡಿದ್ದು, ಸರ್ಕಾರಕ್ಕೆ ಕೂಡಲೇ ವರದಿಯನ್ನು ಸಲ್ಲಿಸಲಾಗುವದು ಎಂದರು.
ಹಾಗೂ ಸ್ಥಳೀಯ ಗ್ರಾಮ ಪಂಚಾಂಯ್ತ್ ಸದಸ್ಯ ದೀಪಕ್ ಶಾಸಕಿ ನಯನ ಮೋಟಮ್ಮ ಅವರ ಗಮನಕ್ಕೂ ತಂದಿದ್ದು ಸೂಕ್ತ ಪರಿಹಾರದ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗುವದು ಎಂದಿದ್ದಾರೆ.
ಮಳೆಯಿಂದ ಮನೆ ಕಳೆದುಕೊಂಡು ಕಂಗಾಲಾಗಿರುವ ಲಕ್ಷ್ಮಮ್ಮ ಅವರು ತೀವ್ರ ನೊಂದಿದ್ದಾರೆ.
*ಪರಿಹಾರಕ್ಕಾಗಿ ಗ್ರಾಮಸ್ಥರು ಒತ್ತಾಯ*
*****************************
ಜಿ ಹೊಸಳ್ಳಿ ಗ್ರಾಮದ ಗ್ರಾಮಸ್ಥರಾದ ರಾಮಚಂದ್ರ, ದಿಲೀಪ್ ಮತ್ತು ಬಿಳಿಯಪ್ಪನವರು ಪತ್ರಿಕೆಯೊಂದಿಗೆ ಮಾತನಾಡಿ ಮನೆ ಕಳೆದುಕೊಂಡ ಲಕ್ಷ್ಮಮ್ಮನವರಿಗೆ ಈ ಕೂಡಲೇ ಸಂಬಂಧಪಟ್ಟ ಗ್ರಾಮ ಪಂಚಾಯತಿಯವರು ಮತ್ತು ತಾಲೂಕು ಆಡಳಿತ ಈ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ಗ್ರಾಮ ಪಂಚಾಯಿತಿ ವತಿಯಿಂದ ವಿಶೇಷ ಮುತುವರ್ಜಿಯನ್ನು ವಹಿಸಿ ಇವರಿಗೆ ಆಶ್ರಯ ಮನೆ ನೀಡುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದು ಗ್ರಾಮಸ್ಥರು ತಾಲೂಕು ಆಡಳಿತವನ್ನು ಒತ್ತಾಯ ಮಾಡಿದ್ದಾರೆ.