October 5, 2024

ಕ್ರೀಡೆಗಳು ಮನುಷ್ಯನ ಆರೋಗ್ಯವನ್ನು ಸುಸ್ಥಿರವಾಗಿ ಕಾಪಾಡುವ ಜೊ ತೆಗೆ ಮನಸ್ಸನ್ನು ಹತೋಟಿಗಿಡುವ ಬಹುದೊಡ್ಡ ಸಾಧನ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

ಚಿಕ್ಕಮಗಳೂರು ತಾಲ್ಲೂಕಿನ ಇಂದಾವರ ಗ್ರಾಮದ ಸಮೀಪ ಐಪಿಎಲ್ ಮಾದರಿಯಲ್ಲಿ ಆಯೋಜಿಸಿದ್ದ ಇಂದಾವರ ಗೌಡಾಸ್ ಪ್ರೀಮಿಯರ್ ಲೀಗ್ ಎರಡು ದಿನಗಳ ಟೆನ್ನಿಸ್ಬಾಲ್ ಕ್ರಿಕೇಟ್ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡಾಪಟುಗಳು ಮೊದಲು ಕ್ರೀಡಾ ಮನೋಭಾವನೆ ಹೊಂದಿರಬೇಕು. ಸ್ಪರ್ಧೆಗಳಲ್ಲಿ ಸೋಲು, ಗೆಲುವು ಸರ್ವೆ ಸಾಮಾನ್ಯ. ಹೀಗಾಗಿ ಗೆಲುವನ್ನು ಸಂತೋಷದಿಂದ ಅಭಿನಂದಿಸುವ ಜೊತೆಗೆ ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂಬರುವ ದಿನಗಳಲ್ಲಿ ಯಶಸ್ಸು ಗಳಿಸಬೇಕು ಎಂದು ಸಲಹೆ ಮಾಡಿದರು.

ಶಾಲಾಕಾಲೇಜುಗಳಲ್ಲೇ ಕ್ರೀಡಾಚಟುವಟಿಕೆ ಅಭ್ಯಾಸಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಪಟುವಾಗಿ ಹೊರಹೊಮ್ಮಲು ಸಾಧ್ಯ. ಇಂದಿನ ಯುವಪೀಳಿಗೆ ಆಸಕ್ತಿ ಹೊಂದಿರುವ ಕ್ರೀಡೆಗಳಲ್ಲಿ ಹೆಚ್ಚೆಚ್ಚು ಭಾಗವಹಿ ಸುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದರು.

ಇಂದಾವರ ಅತ್ಯಂತ ಗೌರವಯುತ ಗ್ರಾಮವಾಗಿದೆ. ಸಮಾಜಸೇವೆ ಹಾಗೂ ರಾಜಕೀಯವಾಗಿ ಅನೇಕರನ್ನು ಜನ್ಮವಿತ್ತ ನೆಲ. ಗ್ರಾಮದ ಕುಟುಂಬಸ್ಥರು ಲಕ್ಷಾಂತರ ವಿದ್ಯಾರ್ಥಿಗಳ ಅನುಕೂಲಕ್ಕೆ ಐಡಿಎಸ್ಜಿ ಕಾಲೇಜು ಜಾಗವನ್ನು ಅಂದಿನ ಸಮಯದಲ್ಲಿ ಉಚಿತವಾಗಿ ನೀಡಿರುವುದನ್ನು ಮರೆಯಲಾಗದು ಎಂದರು.

ಪ್ರಪಂಚದಲ್ಲಿ ಮನುಷ್ಯನ ಜನ್ಮ ಅತ್ಯಂತ ಪುಣ್ಯವಾದುದು. ಇರುವಷ್ಟು ದಿನಗಳಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಸಾಲಿನಲ್ಲಿ ಇಂದಾವರದ ಅನೇಕ ಮಂದಿ ಸೇವೆಯಲ್ಲಿ ನಿರತರಾಗಿರುವುದು ಹೆಮ್ಮೆಯ ವಿಚಾರ. ಸಮಾಜ ಪ್ರತಿ ನಾಗರೀಕರು ಇಂಥ ಕಾರ್ಯಗಳಲ್ಲಿ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ ಸಮುದಾಯವನ್ನು ಮುಖಂಡರನ್ನು ಪರಸ್ಪರ ಒಗ್ಗಟ್ಟಾಗಿಸುವ ನಿಟ್ಟಿನಲ್ಲಿ ಕ್ರಿಕೇಟ್ ಪಂದ್ಯಾವಳಿ ಆಯೋಜಿಸಿ ಪ್ರೇರೇಪಿಸುತ್ತಿರುವುದು ಖುಷಿಯ ಸಂಗತಿ. ಇದರಿಂದ ತಿಳಿದು ತಿಳಿಯದಿರುವ ಅನೇಕ ಮಂದಿ ವೈಯಕ್ತಿಕವಾಗಿ ಸಂಪರ್ಕ ಬೆಳೆಸಿಕೊಳ್ಳಲು ಸಹ ಕಾರಿಯಾಗಲಿದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಯುವಕರು ಅತಿಹೆಚ್ಚು ಮೊಬೈಲ್ ಗೀಳಿಗೆ ದಾಸರಾಗುತ್ತಿರುವುದನ್ನು ತಪ್ಪಿಸಲು ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಕುಂದುಕೊರತೆಗಳಿದ್ದಲ್ಲಿ ಸಂಘದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದ ಅವರು ಕ್ರೀಡಾಪಟುಗಳು ಜನಾಂಗದ ಹೆಸರನ್ನು ಬೆಳೆಸುವ ನಿಟ್ಟಿನಲ್ಲಿ ತೊಡಗಿ ಗೌರವ ಕಾಪಾಡಬೇಕು ಎಂದು ಹೇಳಿದರು.

ಇಂದಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ .ಡಿ.ಚಂದ್ರಶೇಖರ್ ಮಾತನಾಡಿ ಸತತ ಎರಡು ತಿಂಗಳ ಕಾಲ ಕ್ರೀಕೇಟ್ ಪಂದ್ಯಾವಳಿ ತಯಾರಿ ನಡೆಸಲಾಗಿದ್ದು ಅನೇಕ ದಾನಿಗಳು ಹಾಗೂ ಹಿರಿಯರ ಸಹಕಾರ ದಿಂದ ಇಂದು ಪಂದ್ಯಾವಳಿಗೆ ಚಾಲನೆ ನೀಡಲಾಗಿದೆ. ಕೊನೆಯ ದಿನವಾದ ಮೇ.12 ರಂದು ಪಂದ್ಯಾವಳಿ ಮುಕ್ತಾಯಗೊಂಡು ಬಹುಮಾನ ವಿತರಿಸಲಾಗುವುದು ಎಂದರು.

ಎರಡು ದಿನ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ ಜಿಲ್ಲೆಯಿಂದ 16 ತಂಡಗಳು ಭಾಗವಹಿಸಿವೆ. ಪ್ರತಿ ಪಂದ್ಯಾವಳಿಗೆ ಕನಿಷ್ಟ 4 ಓವರ್ ಮಾತ್ರಕ್ಕೆ ಸೀಮಿತಗೊಳಿಸಲಾಗಿದೆ. ಪ್ರಥಮ ಬಹುಮಾನ 1 ಲಕ್ಷ ಆಕ ರ್ಷಕ ಟ್ರೋಫಿ, ದ್ವಿತೀಯ 75 ಸಾವಿರ ಟ್ರೋಫಿ, ತೃತೀಯ 50 ಸಾವಿರ ಟ್ರೋಫಿ, ನಾಲ್ಕನೇ ಸ್ಥಾನಕ್ಕೆ 25 ಸಾವಿರ ಟ್ರೋಫಿ ಹಾಗೂ ಭಾಗವಹಿಸಿ ಎಲ್ಲಾ ತಂಡಗಳಿಗೆ ಪ್ರಮಾಣಪತ್ರ ಟ್ರೋಫಿ ವಿತರಿಸಲಾಗುವುದು ಎಂದು ತಿಳಿಸಿದರು.

ಸಂದರ್ಭದಲ್ಲಿ ಕಾಫಿ ಬೆಳೆಗಾರ ಹಾಗೂ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ .ಎನ್. ಬಸವೇಗೌಡ, ಹಿರಿಯ ಸಲಹೆಗಾರ ಪ್ರಮೋದ್ಚಂದ್ರ, ರಾಜ್ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ .ಕೆ.ಓಂಕಾರೇಗೌಡ, ಒಕ್ಕಲಿಗರ ಸಂಘದ ಮಾಜಿ ಕಾರ್ಯದರ್ಶಿ .ಎಸ್.ಉಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ವಿಕ್ರಾಂತ್, ಆಯೋಜಕ .ಸಿ. ಸಂತೋಷ್, ಮುಖಂಡರಾದ ಪಲ್ಲವಿ ರವಿ, .ಎಂ.ಸುರೇಶ್, .ಕೆ. ನವೀನ್ಗೌಡ, .ಸಿ.ಶ್ರೀನಾಥ್, .ಎನ್.ರೇವಣ್ಣಗೌಡ, ಮಂಜುನಾಥ್, ಚೇತನ, .ಎಂ.ನಾಗೇಶ್ಗೌಡ, ಯತೀಶ್ ಗೌಡ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ