ಮೂಡಿಗೆರೆ ತಾಲೋಕ್ ಬಣಕಲ್ ಹೋಬಳಿಯ ಕೋಳೂರು ಗ್ರಾಮದಲ್ಲಿ ಅಂಬೇಡ್ಕರ್ ರವರ 133ನೇ ಜನ್ಮದಿನದ ಆಚರಣೆಯ “ಅಂಬೇಡ್ಕರ್ ಹಬ್ಬ” ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಊರಿನಲ್ಲಿ ರಸ್ತೆಯ ಉದ್ದಕ್ಕೂ ತಳಿರು ತೋರಣ, ಲೈಟಿಂಗ್ಸ್, ನೀಲಿ ಬಾವುಟ, ಬಂಟಿಂಗ್ಸ್ ಗಳಿಂದ ಶೃಂಗಾರಗೊಳಿಸಿದ್ದರು.
ಸುತ್ತಮುತ್ತಲಿನ ಊರಿನ ಯುವಕರು ಒಟ್ಟಾಗಿ ಸಬ್ಬೆನಹಳ್ಳಿ -ಬಡವನದಿಣ್ಣೆ ತನಕ ಬೈಕ್ ಜಾಥಾ ಹಮ್ಮಿಕೊಂಡಿದ್ದರು.
ಮೂಡಿಗೆರೆ ಶಾಸಕರಾದ ಶ್ರೀಮತಿ ನಯನ ಮೋಟಮ್ಮ ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿ ಸಾಮಾಜಿಕ ಹೋರಾಟಗಾರರಾದ ಶ್ರೀಮತಿ ಅಕ್ಷತಾ ಕೆಸಿ ಹಾವೇರಿ ಮಾತನಾಡಿದರು. ಕೋಳೂರು ಕುಮಾರ್ ಅದ್ಯಕ್ಷತೆ ವಹಿಸಿದ್ದರು.
ಪ್ರಾಸ್ತವಿಕವಾಗಿ ಪಿ ಕೆ ಮಂಜುನಾಥ ಮಾತನಾಡಿದರು. ವೇದಿಕೆಯಲ್ಲಿ ಗಿರೀಶ್, ಮಾರಯ್ಯ ಮೇಸ್ಟ್ರು,ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಸುಶೀಲ ದೊಡ್ಡಯ್ಯ,ಸುಧೀರ್, ಸುಬ್ರಮಣ್ಯ ತ್ರಿಪುರ ಉಪಸ್ಥಿತರಿದ್ದರು. ನವೀನ್ ಕೋಳೂರು ನಿರೂಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಕೋಳೂರು ಸುತ್ತಮುತ್ತಲಿನ ನೂರಾರು ಜನರು ನೆರೆದಿದ್ದರು.