ಇಂದು ಕಾಫಿನಾಡಿನ ಹಲವೆಡೆ ಮಳೆಯಾಗಿದೆ. ಚಿಕ್ಕಮಗಳೂರು ಹಾಸನ ಜಿಲ್ಲೆಯ ಅನೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಬಿಸಿಲಿನಿಂದ ಬೆಂಡಾಗಿದ್ದ ನೆಲಕ್ಕೆ ವರುಣನ ಸಿಂಚನವಾಗಿದೆ.
ಕೆಲವೆಡೆ ಗುಡುಗು ಸಹಿತ ಬಾರೀ ಮಾಳೆಯಾಗಿದ್ದರೆ, ಮತ್ತೆ ಕೆಲವೆಡೆ ಸಾಧಾರಣ ಮಳೆಯಾಗಿದೆ.
ಚಿಕ್ಕಮಗಳೂರು ತಾಲೂಕಿನ ಶಿರಗೋಳ ಗ್ರಾಮದಲ್ಲಿ ಘಟನೆ ಮಳೆಗಾಳಿಗೆ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿಬಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.
ಬಾಳೆಹೊನ್ನೂರು ಸುತ್ತಮುತ್ತ ಗುರುವಾರ ಸಂಜೆಯಂತೆ ಇಂದೂ ಸಹ ಉತ್ತಮ ಮಳೆಯಾಗಿದೆ. ಖಾಂಡ್ಯ, ಸಂಗಮೇಶ್ವರ ಪೇಟೆ, ಜೇನುಗದ್ದೆ, ಶಿರಗೋಳ ಗ್ರಾಮದಲ್ಲಿ ಭಾರೀ ಮಳೆಯಾಗಿದೆ.
ಸಂಗಮೇಶ್ವರ ಪೇಟೆಯ ಶಾಲೆಯ ಕಾಂಪೌಂಡ್ ಮೇಲೆ ಮರವೊಂದು ಬಿದ್ದಿದೆ. ಗಾಳಿ-ಮಳೆಯಿಂದಾಗಿ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ ಬೇಲೂರು ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಅರೇಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿಯ ಹಂತೂರು, ಬೆಟ್ಟದಮನೆ ಸುತ್ತಮುತ್ತಲ ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದೆ.
ಕೊಪ್ಪ ತಾಲ್ಲೂಕಿನ ಅನೇಕ ಪ್ರದೇಶಗಳಲ್ಲಿ ಬಾರೀ ಮಳೆಯಾಗಿದೆ. ಬೊಮ್ಮನಕೂಡಿಗೆ, ಹಿರೇಗದ್ದೆ ಸುತ್ತಮುತ್ತ ಸರಿಸುಮಾರು 2 ಇಂಚು ಮಳೆಯಾಗಿದೆ. ಎನ್.ಆರ್. ಪುರ ಶೃಂಗೇರಿ ಭಾಗದಲ್ಲಿಯೂ ಅನೇಕ ಕಡೆ ಮಳೆಯಾಗಿದೆ.
ಸಕಲೇಶಪುರ ಬಾಳ್ಳುಪೇಟೆ ಸುತ್ತಮುತ್ತಲ ಅನೇಕ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.