ಮೂಡಿಗೆರೆ ಪಟ್ಟಣದ ಕುರುಕುಮಕ್ಕಿಯಲ್ಲಿ ಸೋಮವಾರ ಮತ್ತು ಮಂಗಳವಾರ ಶ್ರೀ ಚೌಡೇಶ್ವರಿ ದೇವಿ ಅವರ ವಾರ್ಷಿಕ ಪೂಜೆ ವಿಜೃಂಭಣೆಯಿಂದ ನಡೆಯಿತು.
ಸೊಮವಾರ ಬೆಳಗ್ಗೆ ಗಣಪತಿ ಹೋಮ, ದುರ್ಗಾ ಹೋಮ, ಸಂಜೆ ಪುಷ್ಪಾಭಿಷೇಕ ನಡೆಯಿತು. ಮಂಗಳವಾರ ಶ್ರೀಚೌಡೇಶ್ವರಿ ಅಮ್ಮನವರು ಮತ್ತು ಸಂಬಂಧಪಟ್ಟ ಸರಪಳಿ ಭೂತಪ್ಪ ದೇವರಿಗೆ ಪಟ್ಟಣದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಿಂದ ವಾದ್ಯಗೋಷ್ಠಿಯೊಂದಿಗೆ ಗಂಗೆ ತರುವ ಕಾರ್ಯಕ್ರಮ, ಕುಂಕುಮಾರ್ಚನೆ, ಮಧ್ಯಾಹ್ನ ಭಕ್ತಿರಿಗೆ ಅನ್ನಸಂತಪರ್ಣೆಣೆ ನಡೆಯಿತು. ಪಟ್ಟಣ, ದುಂಡುಗ, ಹಳೆಮೂಡಿಗೆರೆ, ಕುನ್ನಳ್ಳಿ, ಹಳಸೆ, ಮಾಡ್ಕಲ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹರಕೆ ಕಾಣಿಕೆ ಒಪ್ಪಿಸಿ ದೇವರ ಕೃಪೆಗೆ ಪಾತ್ರರಾದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಕೆ.ಉದಯಶಂಕರ್ ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು ಪೂಜಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.