October 5, 2024

ಚಿಕ್ಕಮಗಳೂರು ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ತಿಂಗಳ 29-30 ರಂದು ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ ಆಯೋಜಿಸಿದ್ದು ಸಮ್ಮೇಳನಕ್ಕೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ ಎಂದು  ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ಸೋಮವಾರ ಚಿಕ್ಕಮಗಳೂರು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಮಾಹಿತಿ ನೀಡಿದ ಅವರು ಅದ್ದೂರಿಯಾಗಿ ಸಮ್ಮೇಳನ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳಾಗಿವೆ ಸರ್ಕಾರ 3 ಲಕ್ಷ ರೂ ಅನುದಾನ ನೀಡಿದ್ದು ಉಳಿದಂತೆ ದಾನಿಗಳ ನೆರವಿನಿಂದ ಸಂಭ್ರಮದಿಂದ ಸಮ್ಮೇಳನ ನಡೆಸಲು ಸಿದ್ಧತೆಗಳಾಗಿದ್ದು 3 ರಿಂದ 4 ಸಾವಿರ ಜನರಿಗೆ ಊಟದ ವ್ಯವಸ್ಥೆ, ಚರ್ಚೆ ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಸಂಭ್ರಮದ ಕನ್ನಡ ಹಬ್ಬವನ್ನಾಗಿ ಸಮ್ಮೇಳನ ನಡೆಸಲಾಗುವುದು ಎಂದರು.

ಮಾರ್ಚ್ 29 ರಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ರವರು ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡುವರು. ಚಂದನ್ ಗ್ರೂಪ್ಸ್‌ನ ಮಂಚೇಗೌಡ ಅವರು ಸಮ್ಮೇಳನಾಧ್ಯಕ್ಷರ ಮೆರವಣಿಗೆ ಉದ್ಘಾಟಿಸುವರು ಪ್ರತಿಷ್ಠಿತ ಆಳ್ವಾಸ್ ವಿದ್ಯಾಸಂಸ್ಥೆ ಮುಖ್ಯಸ್ಥ ಡಾ|| ಮೋಹನ್ ಆಳ್ವ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷರಾಗಿರುವ ಹಳೇಕೋಟೆ ಎನ್. ರಮೇಶ್‌ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ 2 ದಿನದ ಕಾರ್ಯಕ್ರಮದಲ್ಲಿ ಅನ್ನದಾತರ ಅಳಲು ಅಕ್ಷೇಪಗಳು, ವರ್ತಮಾನದಲ್ಲಿ ಮಹಿಳೆ, ಕನ್ನಡ ಚಳುವಳಿಯ ಪರಿಣಾಮಗಳು, ನದಿ ಪಾತ್ರಗಳ ಬಗ್ಗೆ ಸಂವಾದ ವಿಚಾರ ಸಂಕಿರಣ ಜಾನಪದ ಪ್ರಕಾರಗಳು ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಇದೇ ಕಾರ್ಯಕ್ರಮದಲ್ಲಿ ಕೊಡಲಾಗುವ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಎ.ಎಲ್ ಶಂಕರ ನಾರಾಯಣ, ದೀಪಾ ಹಿರೇಗುತ್ತಿ ಇವರಿಗೆ ನೀಡಲಾಗುವುದು ಸಾಹಿತ್ಯ ಪರಿಷತ್‌ನಿಂದ ಮೊದಲ ಭಾರಿಗೆ ಕೊಡಲಾಗುತ್ತಿರುವ ಕನ್ನಡ ಶ್ರೀ ಪ್ರಶಸ್ತಿಯನ್ನು ಮಡ್ಡೀಕೆರೆ ಗೋಪಾಲ್, ಸತ್ಯನ್ ಅವರಿಗೆ ನೀಡಲಾಗುವುದು ಪ್ರತಿ ತಾಲ್ಲೂಕಿಗೆ ಇಬ್ಬರಂತೆ ಜಿಲ್ಲಾ ಮಟ್ಟದ ಕನ್ನಡ ಸಿರಿ ಪ್ರಶಸ್ತಿ ನೀಡಲಾಗುವುದು ಎಂದರು.

ಅತ್ಯುತ್ತಮವಾಗಿ ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ ಚಟುವಟಿಕೆ ನಡೆಸುತ್ತಿರುವ ಶೃಂಗೇರಿ ತಾಲೂಕಿನ ಅಂಗುರ್ಡಿ ದಿನೇಶ್ ಅವರಿಗೆ ಸಂಘಟನಾ ಚತುರ ಪ್ರಶಸ್ತಿ ನೀಡುವುದಾಗಿ ತಿಳಿಸಿದರು.

ಅಂತಿಮವಾಗಿ ಬಹಿರಂಗ ಅಧಿವೇಶನ ಸಮಾರೋಪ ಸಮಾರಂಭ ನಡೆಯಲಿದ್ದು ಹಿರೇಮಗಳೂರು ಕಣ್ಣನ್ ಅವರು ಸಮಾರೋಪ ಭಾ?ಣ ಮಾಡಲಿದ್ದಾರೆ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರತಿಷ್ಠಿತ ಸಾಹಿತಿಗಳು ಹಾಗೂ ಲೇಖಕರಾದ ಡಾ|| ಶರತ್ ಅನಂತ ಮೂರ್ತಿ, ಹಿರಿಯ ಪತ್ರಕರ್ತ ಜಿ.ಕೆ ಸತ್ಯ ಮುಂತಾದ ಅನೇಕರು ಭಾಗವಹಿಸಲಿದ್ದು ಸಾಹಿತ್ಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ  ಬಿ.ಎಸ್. ಜಯರಾಮ್, ಜೆ.ಎಸ್ ರಘು, ದೀಪಕ್ ದೊಡ್ಡಯ್ಯ, ಎಸ್.ಎಸ್ ವೆಂಕಟೇಶ್, ಸೋಮಶೇಖರ್, ರಂಜನ್ ಅಜಿತ್ ಕುಮಾರ್, ಆಶಾ ಮತ್ತಿತರರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ