ಮೂಡಿಗೆರೆ ತಾಲ್ಲೂಕಿನ ಬಣಕಲ್ ವಿಲೇಜ್ನ ಕಲ್ಲಾನಾಥೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದ ಅಂಗವಾಗಿ ವಿವಿಧ ಪೂಜಾ ವಿಧಿವಿಧಾನಗಳು ವಿಜೃಂಭಣೆಯಿಂದ ನಡೆದಿದ್ದು ರುದ್ರಾಭಿಷೇಕ, ನಿತ್ಯಪೂಜೆ, ಪುಣ್ಯಾಹ ವಾಚನ, ಗಣಪತಿ ಪೂಜೆ, ಅಂಕುರಾರ್ಪಣೆ, ಧ್ವಜಪೂಜೆ, ಧ್ವಜಾರೋಹಣ, ಉತ್ಸವ ಬಲಿ, ಮಹಾಮಂಗಳಾರತಿ, ಕಲಾವೃದ್ದಿ ಹೋಮ, ನಿತ್ಯಪೂಜೆ, ಗಿರಿಜಾ ಕಲ್ಯಾಣ, ದೇವರ ರಥರೋಹಣ, ನಿತ್ಯಪೂಜೆ, ದಿವ್ಯ ರಥೋತ್ಸವ, ದೇವರ ಶಯ್ಯಾಧಿವಾಸ, ನಿತ್ಯಪೂಜೆ, ಅವಭೃತ ಸ್ನಾನ ನಡೆಯಿತು.
ರಥೋತ್ಸವದ ಅಂಗವಾಗಿ ವಿವಿಧ ಗ್ರಾಮಗಳಿಂದ ಆಗಮಿಸಿದ ನೂರಾರು ಭಕ್ತಾಧಿಗಳು ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ರಥವನ್ನು ತಳಿರು ತೋರಣ ಪುಷ್ಪಾಲಂಕಾರಗಳಿಂದ ಸಿಂಗರಿಸಲಾಗಿತ್ತು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ದಿವ್ಯಪ್ರಸಾದ್, ಬಿ.ಆರ್.ಅಭಿಲಾಷ್, ಬಿ.ಸಿ ಪ್ರವೀಣ್ ಮುಂತಾದವರು ಇದ್ದರು. .