ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವ ಅಂಗವಾಗಿ #drugfreekarnataka ಹಾಗೂ #fitnessforall ದ್ಯೇಯೋದ್ದೇಶದೊಂದಿಗೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಘಟಕದಿಂದ ಚಿಕ್ಕಮಗಳೂರು ನಗರದಲ್ಲಿ ಇಂದು ಗೋಲ್ಡನ್ ಜ್ಯುಬಿಲಿ ರನ್ (Golden Jubilee Run) ಅನ್ನು ಆಯೋಜಿಸಲಾಗಿತ್ತು.
Golden Jubilee Run ಅನ್ನು ಜಿಲ್ಲಾಧಿಕಾರಿ ಶ್ರೀಮತಿ ಮೀನಾ , ಪೊಲೀಸ್ ಅಧೀಕ್ಷಕರಾದ ವಿಕ್ರಂ ಅಮಟೆ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಚಿಕ್ಕಮಗಲೂರು ತಾಲ್ಲೂಕ್ ಕಛೇರಿ ಆವರಣದಲ್ಲಿ ಓಟವನ್ನು ಉದ್ಘಾಟಿಸಿದರು. ಎಂ.ಜಿ. ರಸ್ತೆ ಮೂಲಕ ಸಾಗಿದ ಓಟ ಆಜಾದ್ ಪಾರ್ಕ್ ಸರ್ಕಲ್ ರವರೆಗೆ ನಡೆಯಿತು.
ಓಟದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.