ಚಾರಣಕ್ಕೆ ಹೋದ ಇಬ್ಬರು ಯುವಕರು ನಾಪತ್ತೆಯಾಗಿದ್ದ ಘಟನೆ ಚಾರ್ಮಾಡಿ ಅರಣ್ಯ ಪ್ರದೇಶದಲ್ಲಿ ನಡೆದಿತ್ತು. ನಂತರ ಪೊಲೀಸರು ಮತ್ತು ಸ್ಥಳೀಯರು ನಾಪತ್ತೆಯಾದವರ ಪತ್ತೆ ಮಾಡಿದ್ದರು.
ಬೆಂಗಳೂರು ಮೂಲದ 10 ಯುವಕರ ತಂಡ ಭಾನುವಾರ ಚಾರಣಕ್ಕೆ ತೆರಳಿತ್ತು. ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ದುರ್ಗದ ಹಳ್ಳಿಯಿಂದ ಚಾರಣಕ್ಕೆ ತೆರಳಿದ್ದರು. ಈ ವೇಳೆ ಇಬ್ಬರು ನಾಪತ್ತೆಯಾಗಿದ್ದು, ಅರಣ್ಯ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದರು.
ಮೂಡಿಗೆರೆಯ ಬಲ್ಲಾಳರಾಯನ ದುರ್ಗದಿಂದ ಬೆಳ್ತಂಗಡಿ ಬಂಡಾಜೆ ಫಾಲ್ಸ್ಗೆ ಚಾರಣಕ್ಕೆ ತೆರಳಿದ್ದರು. ಧನುಷ್ ಎಂಬಾತ ಸುಮಾರು 8 ಕಿ.ಮೀ ಕಾಡಿನ ಮಧ್ಯೆ ಹೋದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಜೊತೆಗೆ ಬಂದ ಸ್ನೇಹಿತರು ಎಷ್ಟೇ ಹುಡುಕಿದರು ಆತನ ಪತ್ತೆಯಾಗಿರಲಿಲ್ಲ. ಕೊನೆಗೆ ಸ್ನೇಹಿತರು ಸ್ಥಳೀಯರ ಗಮನಕ್ಕೆ ತಂದಿದ್ದರು. ನಂತರ ಅರಣ್ಯ ಇಲಾಖೆ ಹಾಗೂ ಪೊಲೀಸರ ಗಮನಕ್ಕೆ ತರಲಾಗಿತ್ತು.
ರಾತ್ರಿ 3 ಗಂಟೆವರೆಗೆ ಕಾಡಿನ ಮಧ್ಯೆ ಪೊಲೀಸರು ಹಾಗೂ ಸ್ಥಳೀಯರ ಸಹಾಯದಿಂದ ಕಾರ್ಯಚರಣೆ ನಡೆಸಿ, ಕಾಡಿನ ಮಧ್ಯ ಭಾಗ 700 ಅಡಿ ಆಳದಲ್ಲಿ ಸಿಲುಕಿದ್ದ ಧನುಷ್ನನ್ನು ಹುಡುಕಿ ರಕ್ಷಣೆ ಮಾಡಿದ್ದಾರೆ.