ಸಖರಾಯಪಟ್ಟಣ ತಾಲ್ಲೂಕು ಕೇಂದ್ರ ರಚಿಸುವಂತೆ ಒತ್ತಾಯಿಸಿ ಚಿಕ್ಕಮಗಳೂರು ಶಾಸಕ ಹೆಚ್.ಡಿ ತಮ್ಮಯ್ಯನವರಿಗೆ ಹೋರಾಟ ಸಮಿತಿ ಮನವಿ ನೀಡಿ ಆಗ್ರಹಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕು ವ್ಯಾಪ್ತಿಗೆ ಸಖರಾಯಪಟ್ಟಣ ಸೇರಿದ್ದು ಹನ್ನೊಂದು ಗ್ರಾಮ ಪಂಚಾಯಿತಿಗಳನ್ನೊಳಗೊಂಡ ಅತಿ ದೊಡ್ಡ ಹೋಬಳಿ ಆಗಿದೆ ಎಂದು ವಿವಿಧ ಪ್ರಗತಿ ಪರ – ಪಕ್ಷಗಳ ಮುಖಂಡರು ಶಾಸಕರಿಗೆ ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.
ರೆವಿನ್ಯೂ ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದರು ಕಂದಾಯ ಇಲಾಖೆಗೆ ಸಂಬಧಿಸಿದ ಕೆಲಸ ಕಾರ್ಯಗಳಿಗೆ ಕಡೂರು ತಹಶೀಲ್ದಾರ್ ಕಾರ್ಯಾಲಯ ಮತ್ತು ತರೀಕೆರೆ ಉಪ ವಿಭಾಗಾಧಿಕಾರಿ ಕಛೇರಿಗೆ ಈ ಹೋಬಳಿ ಸಾರ್ವಜನಿಕರು ಅಲೆಯುವಂತಾಗಿದೆ ಎಂದು ತಿಳಿಸಿದ್ದಾರೆ.
ಲಕ್ಯಾ ಹೋಬಳಿಯಲ್ಲಿ ಹತ್ತು ಗ್ರಾಂ.ಪಂ.ಇದ್ದು ಹಿಂದುಳಿದ ಜನಂಗದವರೇ ಹೆಚ್ಚು ವಾಸಿಸುವ ಪ್ರದೇಶವಾಗಿದೆ. ನೀರಾವರಿ ಸೇರಿದಂತೆ ಇತರ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದು ಈ ನಿಟ್ಟಿನಲ್ಲಿ ಈ ಭಾಗದ ಜನರ ಅನುಕೂಲವಾಗುವಂತೆ ಸಖರಾಯಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ರಚಿಸಲು ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ನಿಯೋಗದಲ್ಲಿ ಅಶೋಕ, ಹರೀಶ್, ದ.ಸಂಸ ತಾಲ್ಲೂಕು ಅಧ್ಯಕ್ಷ ರಮೇಶ್, ಮಂಜುನಾಥ್, ಅಶ್ವಥ್ ಮತ್ತಿತರರಿದ್ದರು.