ಮೂಡಿಗೆರೆ ಕಸಬಾ ವಲಯದ ಮುತ್ತಿಗೆ ಪುರ ಪ್ರೌಢಶಾಲೆಯಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಟ್ಯುಷನ್ ಕ್ಲಾಸ್ ಉದ್ಘಾಟನೆ ಕಾರ್ಯಕ್ರಮವನ್ನು ತಾಲ್ಲೂಕು ಯೋಜನಾದಿಕಾರಿಗಳಾದ ಶಿವನಾಂದ ರವರು ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಜ್ಞಾನ ದೀಪ ಶಿಕ್ಷಕರ ಬಗ್ಗೆ ಶಾಲೆಗೆ ಪಿಠೋಪಕರಣಗಳ ಒದಗಣೆ ಮತ್ತು ಸುಜ್ಞಾನ ನಿಧಿ ಶಿಷ್ಯ ವೇತನದ ಬಗ್ಗೆ ಮಾಹಿತಿ ನೀಡಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಜಯಮ್ಮ ರವರು ನಮ್ಮ ಶಾಲೆಯಲ್ಲಿ 3 ತಿಂಗಳ ಕಾಲ ಟ್ಯುಷನ್ ಕ್ಲಾಸ್ ಮಾಡುತ್ತಿರುವುದು ಹೆಮ್ಮೆಯ ವಿಷಯ ಇದನ್ನೆಲ್ಲ ಆಯೋಜನೆ ಮಾಡಿದಂತ ಪೂಜ್ಯರಿಗೆ ನಾವು ಸದಾ ಚಿರಋಣಿ ಎಂದು ಸಂತೋಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೀತಾರಾಮ, ಶಾಲೆಯ ಎಲ್ಲಾ ಶಿಕ್ಷಕರು, ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಪ್ರವೀಣ್ ಪೂಜಾರಿ, ಪೊಷಕರು sdmcಸದಸ್ಯರು 10 ನೇ ತರಗತಿಯ ವಿದ್ಯಾರ್ಥಿಗಳು, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಭಾರತಿ ಹಾಗೂ ವಲಯದ ಮೇಲ್ವಿಚಾರಕ ದಾಮೋದರ್, ಸೇವಾ ಪ್ರತಿನಿಧಿ ಕಲಾದೇವಿ ಉಪಸ್ಥಿತರಿದ್ದರು