ಹಾಸನ ಜಿಲ್ಲೆ ಅರೇಹಳ್ಳಿ ಯಲ್ಲಿ ನಡೆದ ರೋಟರಿ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಮೂಡಿಗೆರೆ ರೋಟರಿ ಕ್ಲಬ್ ಪ್ರಶಸ್ತಿ ಗಳಿಸಿಕೊಂಡಿದೆ.
ವಲಯ-8 ರ ರೋಟರಿ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಫೈನಲ್ ಪಂದ್ಯದಲ್ಲಿ ಗೋಣಿಬೀಡು ರೋಟರಿ ಕ್ಲಬ್ ತಂಡದ ವಿರುದ್ಧ ಜಯಗಳಿಸಿ ಮೂಡಿಗೆರೆ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಟೂರ್ನಿಯಲ್ಲಿ ಆರು ತಂಡಗಳು ಭಾಗವಹಿಸಿದ್ದವು.
ಉತ್ತಮ ಬ್ಯಾಟ್ಸ್ ಮನ್ ಆಗಿ ಸುನಿಲ್ ಕುಮಾರ್, ಉತ್ತಮ ಬೌಲರ್ ಆಗಿ ಶ್ರವಣ್ ಪ್ರಶಸ್ತಿ ಪಡೆದರು. ನಾಯಕರಾಗಿ ಅಭಿಜಿತ್ ತಂಡವನ್ನು ಮುನ್ನಡೆಸಿದರು.
ತಂಡದಲ್ಲಿ ಮೂಡಿಗೆರೆ ರೋಟರಿ ಅಧ್ಯಕ್ಷ ಕೆ.ಎಲ್.ಎಸ್. ತೇಜಸ್ವಿ, ವಿವೇಕ್ ಪುಣ್ಯಮೂರ್ತಿ, ವಿನೋದ್ ಕುಮಾರ್ ಶೆಟ್ಟಿ, ಹೆಚ್.ಕೆ. ಯೋಗೇಶ್, ಪ್ರಸಾದ್, ವರುಣ್ ಬಿ., ಶೈಲೇಶ್, ಮಂಜುನಾಥ್, ವಿಕಾಸ್, ಸಂತೋಷ್ ಹಂಡುಗುಳಿ, ರಾಕೇಶ್, ರಂಜಿತ್ ಭಾಗವಹಿಸಿದ್ದರು.