ಕಾಡಾನೆ ದಾಳಿಯಿಂದ ಮೃತಪಟ್ಟ ಅರಣ್ಯ ಇಲಾಖೆ ಆನೆ ಕಾರ್ಯಪಡೆ ಗುತ್ತಿಗೆ ನೌಕರ ಕಾರ್ತಿಕ್ ಗೌಡ ಅವರ ಪಾರ್ಥೀವ ಶರೀರಕ್ಕೆ ಅರಣ್ಯ ಇಲಾಖೆಯಿಂದ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.
ಗೌಡಹಳ್ಳಿ ಹಿಂದೂ ರುಧ್ರಭೂಮಿಯಲ್ಲಿ ನಡೆದ ಕಾರ್ತಿಕ್ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರದ ವೇಳೆ ಮೂಡಿಗೆರೆ ಅರಣ್ಯ ಇಲಾಖೆ ವತಿಯಿಂದ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾಲಾಗಿ ನಿಂತು ಸರ್ಕಾರಿ ಗೌರವ ವಂದನೆ ಸಲ್ಲಿಸಿದರು.
ಆನೆ ಕಾರ್ಯಪಡೆಯಲ್ಲಿ ಕಾರ್ತಿಕ್ ಜೊತೆ ಕಾರ್ಯನಿರ್ವಹಿಸುತ್ತಿದ್ದ ಸಹೋದ್ಯೋಗಿಗಳು ತಮ್ಮ ಆತ್ಮೀಯ ಗೆಳೆಯನ ಕಳೆದುಕೊಂಡು ಅತೀವ ದುಃಖಿತರಾಗಿದ್ದರು.
ಆನೆ ಕಾರ್ಯಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ತಿಕ್ ಗೌಡ ಬುಧವಾರ ಆನೆ ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು.
ಗುರುವಾರ ಅವರ ಅಂತ್ಯ ಸಂಸ್ಕಾರ ಗೌಡಹಳ್ಳಿಯಲ್ಲಿ ನೆರವೇರಿತು. ಚಿಕ್ಕಮಗಳೂರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯು.ಪಿ. ಸಿಂಗ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಸೇರಿದಂತೆ ಹಿರಿಯ ಅರಣ್ಯ ಅಧಿಕಾರಿಗಳು ಕಾರ್ತಿಕ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಇಲಾಖೆ ವತಿಯಿಂದ ರೂ. 25 ಲಕ್ಷದ ಚೆಕ್ ವಿತರಿಸಿದರು.
ಪಾರ್ಥೀವ ಶರೀರದೆದುರು ಕಣ್ಣೀರಾದ ಸಾಕುನಾಯಿ : ಕಾರ್ತಿಕ್ ಗೌಡ ಅಂತಿಮ ದರ್ಶನದಲ್ಲಿ ಭಾವುಕ ಕ್ಷಣ