ಸ್ನೇಹ ಆಟೋ ಚಾಲಕರ ಮತ್ತು ಮಾಲಿಕರ ಸಂಘ ಗೋಣಿಬೀಡು, ಮೂಡಿಗೆರೆ ತಾಲ್ಲೂಕು ಇವರ ವತಿಯಿಂದ ಮಂಗಳವಾರ 68ನೇ ಕನ್ನಡರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಗೋಣಿಬೀಡು ಆಟೋ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಕರ್ಯಕ್ರಮದಲ್ಲಿ ಗೋಣಿಬೀಡು ಠಾಣೆಯ ಠಾಣಾಧಿಕಾರಿಗಳಾದ ಹರ್ಷರ್ಧನ್ ಧ್ವಜರೋಹಣ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ನೇಹ ಆಟೋಚಾಲಕರ ಮತ್ತು ಮಾಲಿಕರ ಸಂಘದ ಅಧ್ಯಕ್ಷರಾದ ಪೂರ್ಣೇಶ್ ಮರೇಬೈಲು ವಹಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದಿನೇಶ್ ಜಿ.ಎಸ್., ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ವಿ. ಸಿಂಚನಾ, ತಾಲ್ಲೂಕು ಆಟೋಚಾಲಕರ ಮತ್ತು ಮಾಲಿಕರ ಸಂಘದ ಅಧ್ಯಕ್ಷ ಯು.ಬಿ. ನಾಗೇಶ್, ತಾಲ್ಲೂಕು ಆಟೋಚಾಲಕರ ಮತ್ತು ಮಾಲಿಕರ ಸಂಘದ ಗೌರವ ಅಧ್ಯಕ್ಷರಾದ ಎಂ.ಹೆಚ್. ಅಮರ್ನಾಥ್, ಕಾರ್ಯದರ್ಶಿ ನಾಗರಾಜ್ ಬೆಟ್ಟಗೆರೆ ಹಾಗೂ ಖಜಾಂಚಿ ಹರೀಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗೋಣಿಬೀಡು ಠಾಣಾಧಿಕಾರಿ ಹರ್ಷವಧನ್ ಹಾಗೂ ತಾಲ್ಲೂಕು ಗೌರವ ಅಧ್ಯಕ್ಷ ಅಮರನಾಥ್ ಅವರನ್ನು ಸನ್ಮಾನಿಸಲಾಯಿತು.
ಸಂಘದ ಗೌರವ ಅಧ್ಯಕ್ಷರಾದ ಆನಂದ್ ನಿರೂಪಿಸಿದರು. ಸಂಘದ ಖಜಾಂಚಿ ಶಿವಪ್ಪ ಜಿ.ಹೊಸಹಳ್ಳಿ, ಉಪಾಧ್ಯಕ್ಷರಾದ ರಮೇಶ್ ತಮಟೇಬೈಲು ಮತ್ತು ಸಂಘದ ಎಲ್ಲಾ ಸದಸ್ಯರು ಹಾಜರಿದ್ದು ಯಶಸ್ವಿಗೊಳಿಸಿದರು.