ತೆಲಂಗಾಣ ರಾಜ್ಯದ ವಿಧಾನಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ರಾಜ್ಯದ ವಿಧಾನಸಭಾ ಕ್ಷೇತ್ರವೊಂದಕ್ಕೆ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್. ಅನಂತು ಅವರನ್ನು ಕಾಂಗ್ರೇಸ್ ಪಕ್ಷದ ವೀಕ್ಷಕರಾಗಿ ನೇಮಿಸಲಾಗಿದೆ.
ತೆಲಂಗಾಣದ ನಾಗರಕರ್ನುಲ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವನಪರ್ತಿ ವಿಧಾನಸಭಾ ಕ್ಷೇತ್ರದ ಪೆಬೈರ್ ಮಂಡಲ ವೀಕ್ಷಕರನ್ನಾಗಿ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಅಭಿವರ್ಧಕ ಎಂ ಎಸ್ ಅನಂತರವರನ್ನು ನೇಮಕ ಮಾಡಲಾಗಿದೆ.
AICC ನಿರ್ದೇಶನದ ಮೇರೆಗೆ ಕಾಂಗ್ರೇಸ್ ಪಕ್ಷದ ತೆಲಂಗಾಣ ಉಸ್ತುವಾರಿಯಾಗಿರುವ ಮಾಣಿಕ್ ರಾವ್ ಥಾಕರೆಯವರು ಎಂ.ಎಸ್. ಅನಂತು ಅವರನ್ನು ವೀಕ್ಷಕರಾಗಿ ನೇಮಕ ಮಾಡಲಾಗಿದೆ.
ಈ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಸಚಿವ BRS ಪಕ್ಷದ S ನಿರಂಜನ ರೆಡ್ಡಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೇಘಾರೆಡ್ಡಿ ಕಣದಲ್ಲಿದ್ದಾರೆ.
ಎಂ.ಎಸ್. ಅನಂತು ಈ ಹಿಂದೆ ಮೂಡಿಗೆರೆ ಕಸಬಾ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಕಾಂಗ್ರೇಸ್ ಪಕ್ಷದಿಂದ ಆಯ್ಕೆಯಾಗಿದ್ದರು. ಮಾಜಿ ಸಚಿವೆ ಶ್ರೀಮತಿ ಮೋಟಮ್ಮನವರ ಅಣ್ಣನ ಮಗನಾದ ಅನಂತು ಹಾಲಿ ಕಾಂಗ್ರೇಸ್ ಪಕ್ಷದ ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕಾಂಗ್ರೇಸ್ ಪಕ್ಷದ ವಿವಿಧ ಹುದ್ದೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ.