ಚಿಕ್ಕಮಗಳೂರು ಜಿಲ್ಲೆಯ ಕೆ.ಆರ್. ಪೇಟೆ ಕುಂದೂರಿನ ಯುವತಿ ಕೆ. ಎ. ಅಪೂರ್ವ ಅವರು ಮಂಡಿಸಿದ ಮಹಾಪ್ರಬಂದಕ್ಕೆ ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾನಿಲಯ ಪಿ ಹೆಚ್ ಡಿ ಪದವಿ ನೀಡಿದೆ.
ಅಪೂರ್ವ ಅವರು ಪ್ರೊ. ಬಿ. ಫಕ್ರುದ್ದೀನ್ ಅವರ ಮಾರ್ಗದರ್ಶನದಲ್ಲಿ ಟೊಮೇಟೊ ಮ್ಯಾಜಿಕ್ ರಿಲ್ಸ್ ಸಮೂಹದಲ್ಲಿ ಎಲೆ ಸುರುಳಿ ವೈರಸ್ ಮತ್ತು ಎಲೆ ಚುಕ್ಕೆ ವೈರಸ್ ರೋಗಗಳ ನಿರೋಧಕ ಕ್ಯೂ ಟಿ ಎಲ್ ಎಸ್ ನಕ್ಷೀಕರಣ ಮತ್ತು ಮೈಕ್ರೋ ಆರ್ ಎನ್ ಎ ಗಳು ಹಾಗೂ ಸಂಬಂಧಿತ ಜೀನ್ ಗಳ ಅಭಿವ್ಯಕ್ತಿ ಸಂಕ್ಷೀಪಣೆ ವಿಷಯ ಕುರಿತು ಮಹಾಪ್ರಬಂದ ಮಂಡಿಸಿದ್ದರು.
ಜುಲೈ ತಿಂಗಳಿನಲ್ಲಿ ನಡೆಯಲಿರುವ ವಿವಿ ಯ ಘಟಿಕೋತ್ಸವದಲ್ಲಿ ರಾಜ್ಯಪಾಲರು ಅಪೂರ್ವ ಅವರಿಗೆ ಪದವಿ ಪ್ರಧಾನ ಮಾಡಲಿದ್ದಾರೆ.
ಕೆ.ಎ. ಅಪೂರ್ವ ಅವರು ಸಾಹಿತಿ ಕ.ಸಾ.ಪ. ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ಹಾಗೂ ಚಂಚಲಾಕ್ಷಿ ಅವರ ಪುತ್ರಿಯಾಗಿದ್ದಾರೆ