ಭಾರತೀಯ ಸೇನೆಗೆ ಅಗ್ನಿಪಥ್ ಕಡೆಯಿಂದ ಕಾಫಿನಾಡಿನ ಯುವಕನೋರ್ವ ಆಯ್ಕೆಯಾಗಿದ್ದಾರೆ.
ಭಾರತೀಯ ಸೇನೆಗೆ ಆಯ್ಕೆಯಾಗಿರುವ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿ ಶುಭನಗರ ಗ್ರಾಮದ ಸ್ವಸ್ತಿಕ್ ಪೂಜಾರಿ ಅವರಿಗೆ ಸ್ಥಳೀಯರು ಮತ್ತು ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಆಭಿಮಾನದಿಂದ ಗೌರವಿಸಿದರು.
ಶುಭನಗರದ ವಸಂತ ಪೂಜಾರಿ ಮತ್ತು ಸರಸ್ವತಿ ದಂಪತಿಯ ಪುತ್ರ ಸ್ವಸ್ತಿಕ್ ಪೂಜಾರಿ ಅವರು ಸೇನೆಗೆ ಸೇರಲೆಂದು ಶುಕ್ರವಾರ ಉತ್ತರ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಅವರು ಸೇನೆಗೆ ತೆರಳುವ ಮುನ್ನ ಸ್ಥಳೀಯ ಜನರು ಹಾಗೂ ವಿಶ್ವ ಹಿಂದೂ ಪರಿಷತ್ ಭಗರಂಗದಳದ ಕಾರ್ಯಕರ್ತರು ಸ್ವಸ್ತಿಕ್ ಪೂಜಾರಿ ಅವರಿಗೆ ಭಾರತ ಮಾತೆಯ ಭಾವಚಿತ್ರ ನೀಡಿ ಬೀಳ್ಕೊಟ್ಟರು.