ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಿನ ಜನರು ಹೃದಯಾಘಾತಕ್ಕೆ ಒಳಗಾಗುತ್ತಿರುವುದನ್ನು ಗಮನಿಸಿ, ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘದ ಆಡಳಿತ ಮಂಡಳಿಯು ನಗರದ ಆಶ್ರಯ ಆಸ್ಪತ್ರೆಯ ವೈದ್ಯರೊಂದಿಗೆ ಚರ್ಚಿಸಿ ಹೃದಯ ಸಂಬಂಧಿಸಿದ FLP, RBS,TMT, Ecg, Echo ಇತ್ಯಾದಿಗಳನ್ನು ಪರೀಕ್ಷೆಗಳನ್ನು ಮಾಡಿಸಲು ರಿಯಾಯಿತಿ ನೀಡಬೇಕೆಂದು ಕೋರಿದ್ದರು.
ಇದಕ್ಕ ಸ್ಪಂದಿಸಿರುವ ಡಾ.ಡಿ.ಎಲ್. ವಿಜಯಕುಮಾರ್ ಮಾಲೀಕತ್ವದ ಆಶ್ರಯ ಆಸ್ಪತ್ರೆ ಆಡಳಿತ ಮಂಡಳಿ ಹೃದಯಕ್ಕೆ ಸಂಬಂಧಿಸಿದ FLP, RBS, TMT, Ecg, Echo ಇತ್ಯಾದಿಗಳನ್ನು ಪರೀಕ್ಷೆಗಳನ್ನು ಸಾಮಾನ್ಯ ಶುಲ್ಕದಲ್ಲಿ ರೂ.8,500/- ಗಳು ಖರ್ಚಾಗುತ್ತಿದ್ದನ್ನು ಕೇವಲ ರೂ.2,500/- ಗಳ ಶುಲ್ಕದ ಪ್ಯಾಕೇಜ್ ನಲ್ಲಿ ಮಾಡಿಕೊಡಲು ಒಪ್ಪಿರುತ್ತಾರೆ.
ಈ ಅವಕಾಶ ಅಕ್ಟೋಬರ್ 10, 2023 ರವರೆಗೆ ಮಾತ್ರ ಇರುತ್ತದೆ. ಈ ಪ್ರಯೋಜನವನ್ನು ಜಿಲ್ಲೆಯ ಎಲ್ಲಾ ಜನಾಂಗದ ಜನರು ಸದುಪಯೋಗ ಪಡಿಸಿಕೊಂಡು ಈ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದರ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಟಿ. ರಾಜಶೇಖರ್, ಗೌರವ ಕಾರ್ಯದರ್ಶಿ ಎಂ.ಸಿ. ಪ್ರಕಾಶ್ ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ನೌಕರರನ್ನು ಈ ಕೆಳಕಂಡ ನಂಬರ್ ಗಳಲ್ಲಿ ಸಂಪರ್ಕಿಸಬಹುದು.
ಯಶವಂತ್ ಎನ್.ಬಿ, 8088520115, ಸುಬ್ರಮಣಿಂ, 9341064950, 9845617767