October 5, 2024

ಮೂಡಿಗೆರೆ ಅರಣ್ಯ ಇಲಾಖೆ ವ್ಯಾಪ್ತಿಯ ಇಬ್ಬರು ಅರಣ್ಯ ರಕ್ಷಕರಿಗೆ ಅವರ ಉತ್ತಮ ಸೇವೆಗಾಗಿ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಗಿದೆ.

ಮೂಡಿಗೆರೆ ಅರಣ್ಯ ವಲಯ ವ್ಯಾಪ್ತಿಯ ಭಾರತೀಬೈಲ್ ಶಾಖೆಯ ಅರಣ್ಯ ರಕ್ಷಕ ಮೋಸಿನ್ ಮತ್ತು ಬಣಕಲ್ ಶಾಖೆಯ ಅರಣ್ಯ ರಕ್ಷಕ ಪರಮೇಶ್ ಅವರಿಗೆ ಅವರ ಉತ್ತಮ ಸೇವೆಯನ್ನು ಪರಿಗಣಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಬ್ಯಾಂಕ್ವಿಟ್ ಹಾಲ್ ನಲ್ಲಿ ಮುಖ್ಯಮಂತ್ರಿ ಪದಕ ಪ್ರದಾನ ಮಾಡಿದರು.

ಅರಣ್ಯ ರಕ್ಷಕರಾದ ಮೋಸಿನ್ ಅವರು 12 ವರ್ಷಗಳ ಕಾಲ ವನ್ಯ ಸಂರಕ್ಷಣಾ ಕಾರ್ಯದಲ್ಲಿ ಉತ್ತಮ ಸೇವೆ ನೀಡಿದ್ದು ಐದು ವರ್ಷ ಮುತ್ತೋಡಿ ಅರಣ್ಯ ಭಾಗದಲ್ಲಿ ಸೇವೆ ನೀಡಿ ನಂತರ ಅಲ್ಲಿಂದ ವರ್ಗಾವಣೆಯಾಗಿ ಎರಡು ವರ್ಷ ಬಿದರಹಳ್ಳಿ ಭಾಗದಲ್ಲಿ ಸೇವೆ ನೀಡಿದರು. ಪ್ರಸ್ತುತ ಭಾರತೀಬೈಲ್ ಅರಣ್ಯ ವಿಭಾಗದಲ್ಲಿ ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿ.ಹೊಸಹಳ್ಳಿ ಅರಣ್ಯ ಭಾಗದಲ್ಲಿ ಅರಣ್ಯ ಉತ್ಪನ್ನ ಕಳ್ಳತನ ಪ್ರಕರಣ, ಅಕ್ರಮ ಮರ ಕಡಿತಲೆ ಪ್ರಕರಣಗಳನ್ನು ಭೇದಿಸಿದ್ದಾರೆ. ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಶ್ರೀಗಂಧ, ಜಿಂಕೆ ಕೊಂಬು ಮತ್ತಿತರ ವಸ್ತುಗಳನ್ನು ಕಳ್ಳರಿಂದ ವಶಪಡಿಸಿಕೊಂಡು ಪ್ರಾಮಾಣಿಕತೆಯ ಸೇವೆ ನೀಡಿದ್ದಾರೆ. ಮೂಡಿಗೆರೆ ವ್ಯಾಪ್ತಿಯಲ್ಲಿ ಅಕ್ರಮ ಬೀಟೆ ಮರ ಅಕ್ರಮ ದಾಸ್ತಾನು ಪತ್ತೆ ಹಚ್ಚಿ ಸೇವೆ ನೀಡಿರುವುದು. 2021-22 ಸಾಲಿನಲ್ಲಿ ಸ.ನಂ256 ರಲ್ಲಿ 50ಹೆಕ್ಟೇರು ಹಾಗೂ ಸನಂ. 212ರಲ್ಲಿ 50 ಹೆಕ್ಟೇರ್ ಮುಂಗಡ ಕಾಮಗಾರಿಯ ಕೆಲಸ ಕಾರ್ಯಗಳನ್ನು ದಕ್ಷತೆಯಿಂದ ನಿರ್ವಹಣೆ ಮಾಡಿದ್ದಾರೆ. ಅರಣ್ಯ ಇಲಾಖೆಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ 7 ಬಾರಿ ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಲು ಆಯ್ಕೆಯಾಗಿ 2 ಬಾರಿ ಕಂಚಿನ ಪದಕ ಪಡೆದಿದ್ದಾರೆ.

ಅರಣ್ಯ ರಕ್ಷಕರಾದ ಪರಮೇಶ್ ಅವರು 2000ರಲ್ಲಿ ಊರುಬಗೆ ಗಸ್ತಿನ ಬಾಳೂರು ಮೀಸಲು ಅರಣ್ಯದ ಅರಣ್ಯ ವೀಕ್ಷಕರಾಗಿ ಮೂಡಿಗೆರೆ ವಲಯದಲ್ಲಿ ಕರ್ತವ್ಯ ಪ್ರಾರಂಭಿಸಿ ಮುಂಬಡ್ತಿ ಹೊಂದಿ ಅರಣ್ಯ ರಕ್ಷಕರಾಗಿ ಜನ್ನಾಪುರ ಗಸ್ತಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಊರುಬಗೆ ಗಸ್ತಿನಲ್ಲಿ ಅರಣ್ಯ ವೀಕ್ಷಕರಾಗಿದ್ದಾಗ 2011 ರಲ್ಲಿ ಮರ ತುಂಬಲು ಬಂದಿದ್ದ ಸಾಕಿದ ಆನೆಗೆ ಮದವೇರಿದನ್ನು ಪತ್ತೆ ಮಾಡಿ ಆನೆಯನ್ನು ಸಕ್ರೇಬೈಲಿಗೆ ಸಾಗಿಸುವ ಕಾರ್ಯವನ್ನು ನಿರ್ವಹಿಸಿದ್ದರು. ಹಲವಾರು ಅಕ್ರಮ ಮರ ಕಡಿತಲೆ ಪ್ರಕರಣವನ್ನು ಭೇದಿಸಿ ಪ್ರಕರಣವನ್ನು ದಾಖಲಿಸಲು ಸಹಕರಿಸಿದ್ದಾರೆ. ಕಾಡಾನೆ ಹಾಗೂ ಮಾನವ ಸಂಘರ್ಷ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ಈ ಹಿನ್ನಲೆಯಲ್ಲಿ ಇವರಿಗೆ ಮುಖ್ಯಮಂತ್ರಿಗಳ ಪದಕ ದೊರೆತಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ