ಕ್ರೀಡಾ ಭಾರತಿ ಸಕಲೇಶಪುರ ವತಿಯಿಂದ ಶನಿವಾರ ಸಕಲೇಶಪುರ ಪಟ್ಟಣದ ಪುರಸಭೆಯ ಪೌರಕಾರ್ಮಿಕ ಮಹಿಳೆಯರಿಗೆ ಗೌರಿ ಬಾಗಿನ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕ್ರೀಡಾ ಭಾರತಿ ಪ್ರಮುಖರಾದ ಮೋಹನ್ ಕುಮಾರ್ ಅವರು ; ನಗರ ಸ್ವಚ್ಚವಾಗಿ ಇಡಲು ಪೌರ ಕಾರ್ಮಿಕರ ಪಾತ್ರ ಬಹಳ ಮಹತ್ವದ್ದು. ಪ್ರತಿನಿತ್ಯ ಮಳೆ ಗಾಳಿ ಚಳಿಯೆನ್ನದೆ ಮುಂಜಾವಿನಲ್ಲಿ ತಮ್ಮ ಕರ್ತವ್ಯಕ್ಕೆ ಹಾಜರಾಗಿ ಸ್ವಚತೆ ಯಲ್ಲಿ ತೊಡಗುವ ಆ ತಾಯಂದಿರ ಸೇವೆ ಅಮೂಲ್ಯವಾದದ್ದು. ಪ್ರತಿ ನಿತ್ಯ ಅವರ ಸೇವೆ ಪಡೆಯುವ ನಾವು ಅವರ ಪರಿಶ್ರಮಕ್ಕೆ ಬೆಲೆ ಕೊಡುವುದೇ ಕಮ್ಮಿ . ಅವರ ಸೇವೆ ನೆನೆದು ತಾಯಂದಿರಿಗೆ ಬಾಗಿನ ಕೊಟ್ಟು ಗೌರವಿಸುವ ಕಾರ್ಯಕ್ರಮವನ್ನು ಕ್ರೀಡಾ ಭಾರತಿ ಸಕಲೇಶಪುರ ಪ್ರತಿವರ್ಷ ನಡೆಸುತ್ತಾ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ದರ್ಶಿನಿ ರಾಕೇಶ್, ಉಷಾ, ಕ್ರೀಡಾ ಭಾರತಿ ಸದಸ್ಯರು, ಪುರಸಭೆ ಸಿಬ್ಬಂದಿ ಆಡಳಿತ ವರ್ಗ, ಪುರಸಭೆ ಸದಸ್ಯರು ಭಾಗಿಯಾಗಿದ್ದರು