October 5, 2024

ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು, ವಿವಾಹ ನೋಂದಣಿ, ಚಾಲನಾ ಲೈಸನ್ಸ್, ಸರ್ಕಾರಿ ನೇಮಕಾತಿ ಹೀಗೆ ಹಲವು ಸೌಲಭ್ಯಗಳನ್ನು ಪಡೆಯಲು ಅಕ್ಟೋಬರ್ 1ರಿಂದ ದೇಶಾದ್ಯಂತ ಜನನ ಪ್ರಮಾಣಪತ್ರ ಏಕೈಕ ದಾಖಲೆಯಾಗಲಿದೆ.

ಸರ್ಕಾರಿ ಸೇವೆಗಳನ್ನು ದಕ್ಷವಾಗಿ ಮತ್ತು ಪಾರದರ್ಶಕವಾಗಿ ಒದಗಿಸಲು, ಸಾಮಾಜಿಕ ಪ್ರಯೋಜನ ಮತ್ತು ಡಿಜಿಟಲ್ ನೋಂದಣಿಯನ್ನು ಈ ಹೊಸ ಉಪಕ್ರಮ ಖಾತರಿಪಡಿಸಲಿದೆ ಎಂದು ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ-2003ರ ಅನುಷ್ಠಾನ ದಿನಾಂಕವನ್ನು ಘೋಷಿಸಿದ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ಹೊಸ ಕಾಯ್ದೆಯು ಭಾರತದ ರಿಜಿಸ್ಟ್ರಾರ್ ಜನರಲ್ ಅವರಿಗೆ ಜನಸಂಖ್ಯಾ ಸಮೀಕ್ಷೆಗಳನ್ನು ಅಧ್ಯಯನ ಮಾಡುವ, ನೋಂದಾಯಿತ ಜನನ ಮತ್ತು ಮರಣದ ರಾಷ್ಟ್ರೀಯ ದತ್ತಾಂಶಗಳನ್ನು ನಿರ್ವಹಿಸುವ ಹಾಗೂ ಇವುಗಳನ್ನು  ರಾಜ್ಯಗಳು ನೇಮಿಸುವ ಮುಖ್ಯ ರಿಜಿಸ್ಟ್ರಾರ್ ಮತ್ತು ಸ್ಥಳೀಯ ಹಂತಕ್ಕೆ ಸರ್ಕಾರ ನೇಮಕ ಮಾಡುವ ರಿಜಿಸ್ಟ್ರಾರ್ ಜತೆ ಹಂಚಿಕೊಳ್ಳುವ ಅಧಿಕಾರ ಇರುತ್ತದೆ. ರಾಜ್ಯಮಟ್ಟದಲ್ಲೂ ಈ ಮಾಹಿತಿಯನ್ನು ನಿರ್ವಹಿಸಲಾಗುತ್ತದೆ.

ಅದೇರೀತಿ ಸಾಂಸ್ಥಿಕವಲ್ಲದ ದತ್ತುಪಡೆಯುವ ಪ್ರಕರಣಗಳಲ್ಲಿ ದತ್ತು ಪಡೆಯುವ ಪೋಷಕರ ಹೆಸರನ್ನು, ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುವ ಜೈವಿಕ ಪೋಷಕರ ಹೆಸರನ್ನು, ಏಕ ಪೋಷಕ ಅಥವಾ ಅವಿವಾಹಿತ ತಾಯಂದಿರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲು ಹೊಸ ಕಾಯ್ದೆ ಅವಕಾಶ ಮಾಡಿಕೊಡುತ್ತದೆ.

ಈ ಮಾಹಿತಿಯನ್ನು ಜನಸಂಖ್ಯೆ ನೋಂದಣಿ, ಮತದಾರರ ನೋಂದಣಿ, ಪಡಿತರ ಚೀಟಿ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸಲು ಅವಕಾಶ ಇರುತ್ತದೆ.

ರಿಜಿಸ್ಟ್ರಾರ್ ಅವರ ಆದೇಶ ಅಥವಾ ಕ್ರಮದಿಂದ ಯಾರಿಗಾದರೂ ತೊಂದರೆಯಾದಲ್ಲಿ ಅಂತಹ ಆದೇಶದ ವಿರುದ್ಧ 30 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಈ ಮನವಿಗೆ 90 ದಿನಗಳ ಒಳಗಾಗಿ ಉತ್ತರ ನೀಡಬೇಕಾಗುತ್ತದೆ.

ಇದುವರೆಗೆ ಸರ್ಕಾರದ ಬಹುತೇಕ ವ್ಯವಹಾರಗಳಿಗೆ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿತ್ತು. ಇನ್ಮುಂದೆ ಜನನ ಪ್ರಮಾಣ ಪತ್ರವನ್ನು ಪ್ರಮುಖ ದಾಖಲೆಯಾಗಿ ಪರಿಗಣಿಸುವ ಸಾಧ್ಯತೆಯಿದೆ. ಹಾಗಾಗಿ ಎಲ್ಲರೂ ಆದಷ್ಟು ತಮ್ಮ ಜನನ ಪ್ರಮಾಣ ಪತ್ರವನ್ನು ಜೋಪಾನವಾಗಿ ಕಾಯ್ದಿಟ್ಟುಕೊಳ್ಳಬೇಕಾದ, ಹಾಗೆಯೇ ಅನೇಕರು ಜನನ ಪ್ರಮಾಣ ಪತ್ರವನ್ನು ಹೊಂದಿಲ್ಲ. ಅಂತಹವರು ಜನನ ಪ್ರಮಾಣ ಪತ್ರವನ್ನು ಮಾಡಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ