ಮೂಡಿಗೆರೆ ತಾಲ್ಲೂಕಿನ ಜನ್ನಾಪುರ ಜೇಸಿಐ ಸಮೃದ್ಧಿ ಘಟಕದ ವತಿಯಿಂದ ಏಳು ದಿನಗಳ ಜೇಸಿ ಸಪ್ತಾಹ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ವಿವಿಧ ವಿಷಯಗಳನ್ನು ಇಟ್ಟುಕೊಂಡು ಪ್ರತಿದಿನ ಒಂದೊಂದು ವಿಶೇಷ ಕಾರ್ಯಕ್ರಮ ನಡೆಸಲಾಗುತ್ತಿದೆ.
ಸಪ್ತಾಹದ ಅಂಗವಾಗಿ ಭಾನುವಾರ ಮೂಡಿಗೆರೆಯ ಪ್ರಸಿದ್ಧ ಯಾತ್ರ ಸ್ಥಳ ದೇವರ ಮನೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ದೇವರಮನೆ ದೇವಾಲಯದ ಸುತ್ತಮುತ್ತಲ ಪ್ರದೇಶಗಳಲ್ಲಿ ವಿವಿಧ ಜಾತಿಯ ಹಣ್ಣಿನ ಮರಗಳನ್ನು ನೆಡಲಾಯಿತು
ಈ ಸಂದರ್ಭದಲ್ಲಿ ಜೆಸಿಐ ಘಟಕದ ಅಧ್ಯಕ್ಷ ಎನ್.ಜೆ. ಭರತ್ ನಿಡಗೋಡು ಹಾಗೂ ಪೂರ್ವ ಅಧ್ಯಕ್ಷ ಸಂದೀಪ್ ಜೇನುಬೈಲ್ ಮತ್ತು ಜೆಸಿಐ ಸದಸ್ಯರುಗಳು ಭಾಗಿಯಾಗಿದ್ದರು.
ವರದಿ : ಸಿ. ಎಲ್. ಪೂರ್ಣೇಶ್ ಚಕ್ಕುಡಿಗೆ.