ಅತಿ ವೇಗವಾಗಿ ಓವರ್ ಟೆಕ್ ಮಾಡಲು ಹೋದ ಪ್ರವಾಸಿ ವಾಹನ ಒಂದು ಮಗುಚಿ ಬಿದ್ದು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ
ನಿನ್ನ ಸಂಜೆ ಸುಮಾರು ಆರು ಮೂವತ್ತರ ಸಮಯದಲ್ಲಿ ಮೂಡಿಗೆರೆ ಸಮೀಪದ ಹಳೆಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ
ಬೆಂಗಳೂರು ಮೂಲದ ಪ್ರವಾಸಿಗರು ದೇವರಮನೆ ಪ್ರವಾಸ ಮುಗಿಸಿ ವಾಪಸ್ ಬರುತ್ತಿದ್ದಾಗ ಈ ಘಟನೆ ನಡೆದಿದೆ
ಹಳೆಕೋಟೆ ಗ್ರಾಮದ ನೇರ ರಸ್ತೆಯಲ್ಲಿ ಮತ್ತೊಂದು ಕಾರನ್ನು ಅತಿ ವೇಗದಲ್ಲಿ ಓವರ್ಟೇಕ್ ಮಾಡಲು ಪ್ರಯತ್ನಿಸಿದ ಸಂದರ್ಭದಲ್ಲಿ ಕಾರು ತನ್ನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮಣ್ಣಿನ ದೆಬ್ಬವೊಂದಕ್ಕೆ ಡಿಕ್ಕಿ ಹೊಡೆದು ಮೂರ್ನಾಲ್ಕು ಸುತ್ತು ಸುತ್ತು ರಸ್ತೆ ಪಕ್ಕಕ್ಕೆ ಬಿದ್ದಿದೆ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮರವೊಂದರ ತೊಗಟೆ ಸಂಪೂರ್ಣ ಕಳಚಿಬಿದ್ದಿದೆ.
ಲಘಟನೆಯಲ್ಲಿ ನಾಲ್ವರು ಪ್ರಯಾಣಿಕರಿಗೆ ಗಾಯಗಳಾಗಿದ್ದು ಅದರಲ್ಲಿ ಓರ್ವ ಪ್ರಯಾಣಿಕರಿಗೆ ಬೆನ್ನಿನ ಭಾಗದಲ್ಲಿ ಮೂಳೆಮುರಿತವಾಗಿದೆ ಎಂದು ತಿಳಿದುಬಂದಿದೆ
ಘಟನೆಯ ತಕ್ಷಣ ಸ್ಥಳೀಯರು ಮೂಡಿಗೆರೆ ಅಗ್ರಿಟೆಕ್ ಇಂಜಿನಿಯರ್ಸ್ ಮಾಲೀಕ ರವೀಂದ್ರ ಮರಗುಂದ ಅವರ ಕಾರಿನಲ್ಲಿ ಗಾಯಗೊಂಡವರನ್ನು ಮೂಡಿಗೆರೆ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಪ್ರವಾಸಿ ವಾಹನಗಳ ಅತಿವೇಗದಿಂದ ಸ್ಥಳೀಯರು ಆತಂಕದಲ್ಲಿ ವಾಹನ ಚಲಾಯಿಸುವಂತಾಗಿದೆ.