ರಾಜ್ಯ ಸರ್ಕಾರವು ರಾಜ್ಯದ ಹಲವು ಐಪಿಎಸ್ ಅಧಿಕಾರಿಗಳು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಹಾಸನ ಎಸ್ಪಿಯಾಗಿದ್ದ ಹರಿರಾಂ ಶಂಕರ್ ಅವರನ್ನು ಸೂಪರಿಟೆಂಡೆಂಟ್ ಆಪ್ ಪೊಲೀಸ್ ಇಂಟಲಿಜೆನ್ಸ್ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಹಾಸನದ ನೂತನ ಎಸ್ಪಿಯಾಗಿ ಶ್ರೀಮತಿ ಮಹಮ್ಮದ್ ಸುಜೀತ ಅವನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರು ದಕ್ಷಿಣ ವಿಭಾಗದ ಟ್ರಾಫಿಕ್ ವಿಭಾಗದ ಡೆಪ್ಯೂಟಿ ಕಮಿಷನರ್ ಆಗಿದ್ದ 2014 ರ ಯುವ ಐಪಿಎಸ್ ಅಧಿಕಾರಿ ಮಹಮ್ಮದ್ ಸುಜೀತ ಇದೀಗ ಹಾಸನದ ಎಸ್ಪಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮೊಹಮ್ಮದ್ ಸುಜೀತ ಅವರು ತಮಿಳುನಾಡು ಮೂಲದವರಾಗಿದ್ದು ಅವರು 2013 ರ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಐ.ಪಿ.ಎಸ್. ಅಧಿಕಾರಿಯಾಗಿ ಕರ್ನಾಟಕದ ವಿವಿದೆಡೆ ಕಾರ್ಯನಿರ್ವಹಿಸಿದ್ದರು. ಈ ಹಿಂದೆ ಕೋಲಾರ ಜಿಲ್ಲೆ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು.
ರಾಜ್ಯ ಸರ್ಕಾರವು ಒಟ್ಟು 35 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಮಂಗಳೂರು ಸಿಟಿ ಪೊಲೀಸ್ ಕಮಿಷನರ್ ಆಗಿ ಅನುಪಮ್ ಅಗರ್ವಾಲ್ ಅವರನ್ನು, ಉಡುಪಿ ಜಿಲ್ಲಾ ಎಸ್ಪಿಯಯಾಗಿ ಡಾ. ಅರುಣ್ ಕೆ. ಅವರನ್ನು ನೇಮಕ ಮಾಡಲಾಗಿದೆ.
ಸಾಧಕರಿಗೆ ಸ್ಪೂರ್ತಿಯಾಗುವ ಸುಜೀತ ಅವರ ಮಾತುಗಳು.