ಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ ತಾಲ್ಲೂಕು ವತಿಯಿಂದ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟನೆ ಮಾಡಲಾಯಿತು.
ಕ.ಸಾ.ಪ. ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ಮೂಡಿಗೆರೆ ಪಟ್ಟಣದ ವಿ.ಪಿ.ನಾರಾಯಣ್ ಶ್ರೀಮತಿ ಭಾಗ್ಯ ನಾರಾಯಣ್ ದಂಪತಿಗಳ ಮನೆಯಲ್ಲಿ ನೆರವೇರಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ. ತಾಲ್ಲೂಕು ಅಧ್ಯಕ್ಷರಾದ ಹೆಚ್.ಎಂ.ಶಾಂತಕುಮಾರ್ ವಹಿಸಿದ್ದರು.
ಶಿಕ್ಷಕರಾದ ಗಂಗಾದರಪ್ಪ ಉಪನ್ಯಾಸವನ್ನು ನೀಡಿದರು. ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಜಗದೀಪ್, ಕಸಬಾ ಹೋಬಳಿ ಅಧ್ಯಕ್ಷರಾದ ಎಂ.ಎಸ್.ನಾಗರಾಜ್. ಹಾ. ಬಾ ನಾಗೇಶ್, ವಿಶಾಲ ನಾಗರಾಜ್, ಆರ್. ಪ್ರಕಾಶ್, ಹೈಸೆನಾರ್ ಬಿಳಗುಳ, ನಾಗರತ್ನ, ದಾಕ್ಷಾಯಿಣಿ, ಶಿಕ್ಷಕ ವೃಂದ, ಕಸಾಪದ ಸದಸ್ಯರುಗಳು ಉಪಸ್ಥಿತರಿದ್ದರು.