ಮೂಡಿಗೆರೆ ತಾಲ್ಲೂಕಿನ, ಕಿರುಗುಂದ ದಿಂದ ಕಜ್ಜೇಹಳ್ಳಿ ಮೂಲಕ ಜಾಣಿಗೆ ಹೋಗುವ ರಸ್ತೆಗೆ ಡಾಂಬಾರಿಕರಣವಾಗಿ ಐದು ತಿಂಗಳೊಳಗೆ ಹಾಕಿರುವ ಡಾಂಬಾರ್ ಕಿತ್ತು ಬರುತ್ತಿದೆ.
ಇದರಿಂದ ಆಕ್ರೋಶಗೊಂಡ ಕಿರುಗುಂದ ಗ್ರಾಮದ ಯುವಕರು ಅಧಿಕಾರಿಗಳ ಹಾಗೂ ಗುತ್ತಿಗೆದಾರ ನ ವಿರುದ್ದ ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ದಿಕ್ಕಾರ ಕೂಗಿ ಕಿತ್ತುಬರುತ್ತಿರುವ ರಸ್ತೆಗೆ ಬಾಳೆಗಿಡ ನೆಟ್ಟು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಇದು ಅಂದಾಜು ಎಂಟು ಕೋಟಿ ರೂ ಗಳ ಕಾಮಗಾರಿ ಆಗಿದ್ದು ಪ್ರದಾನಮಂತ್ರಿ ಗ್ರಾಮ ಸಡಕ್ ಯೋಜನೆ ಅನ್ವಯ ಮಂಜೂರಾಗಿದ್ದು ಸಂಪೂರ್ಣ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ರಸ್ತೆಗೆ ಹೊಸದಾಗಿ ಡಾಮಾರೀಕರಣ ಮಾಡಬೇಕೆಂಬ ಬೇಡಿಕೆ ಇಟ್ಟಿರುವ ಸ್ಥಳೀಯರು ರಸ್ತೆ ಅವ್ಯವಸ್ಥೆ ಸರಿಪಡಿಸದೇ ಇದ್ದರೆ ಮೂಡಿಗೆರೆ ತಾಲ್ಲೂಕು ಕಛೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ವರದಿ : ಪೂರ್ಣೇಶ್ ಚಕ್ಕುಡಿಗೆ