ಕೊಡಗು ಜಿಲ್ಲೆಯಲ್ಲಿ ಮತ್ತೋರ್ವ ವ್ಯಕ್ತಿ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.
ಜಿಲ್ಲೆಯ ಸೋಮವಾರ ಪೇಟೆ ತಾಲ್ಲೂಕಿನಲ್ಲಿ ಇಂದು ಬೆಳಿಗ್ಗೆ ಕೃಷಿಕರೊಬ್ಬರನ್ನು ಕಾಡಾನೆ ದಾಳಿಮಾಡಿ ಸಾಯಿಸಿದೆ.
ಸೋಮವಾರಪೇಟೆ ತಾಲ್ಲೂಕಿನ ಅಡಿಯನಾಡೂರು ಗ್ರಾಮದ ಕೃಷಿ ಈರಪ್ಪ (೬೦ ವರ್ಷ) ಕಾಡಾನೆ ದಾಳಿಯಲ್ಲಿ ಮೃತಪಟ್ಟವರು.
ಇಂದು ಮುಂಜಾನೆ ೭ ಗಂಟೆಯ ಸಮಯದಲ್ಲಿ ಹಾಲು ಕೊಡುತ್ತಿದ್ದ ತಮ್ಮ ಹಸುವನ್ನು ಹುಡುಕಿಕೊಂಡು ಗೌರಿಗದ್ದೆ ಬಳಿ ಹೋಗುತ್ತಿದ್ದಾಗ ಪಕ್ಕದ ಅರಣ್ಯದಿಂದ ಬಂದ ಕಾಡಾನೆ ಈರಪ್ಪ ಅವರ ಮೇಲೆರಗಿ ಅವರನ್ನು ತುಳಿದು ಸಾಯಿಸಿದೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮೂರು ಜನ ಕಾಡಾನೆಗೆ ಬಲಿಯಾಗಿದ್ದಾರೆ. ಹಾಗೇಯೇ ಒಂದು ವಾರದ ಹಿಂದೆ ಸಕಲೇಶಪುರ ಸಮೀಪ ಮಹಿಳೆಯೊಬ್ಬರನ್ನು ಕಾಡಾನೆ ತುಳಿದು ಸಾಯಿಸಿತ್ತು.