ಭಾರತದ ಮಹತ್ವಾಕಾಂಕ್ಷೆ ಯೋಜನೆಯಾದ ಚಂದ್ರಯಾನ – 3 ರ ವಿಕ್ರಮ್ ಲ್ಯಾಂಡರ್ ಚಂದ್ರನ ಕಕ್ಷೆ ಮೇಲೆ ಸುರಕ್ಷಿತವಾಗಿ ತಲುಪಬೇಕೆಂದು ಹಾಗೂ ಭಾರತೀಯ ಇಸ್ರೋ ಸಂಸ್ಥೆಯ ಹೆಮ್ಮೆಯ ವಿಜ್ಞಾನಿಗಳ ಪರಿಶ್ರಮಕ್ಕೆ ನಿರೀಕ್ಷೆಗೂ ಮೀರಿದ ಫಲ ಸಿಗಲೆಂದು ಬಿಜೆಪಿ ಯುವಮೋರ್ಚ ಮೂಡಿಗೆರೆ ಮಂಡಲದ ವತಿಯಿಂದ ಪಟ್ಟಣದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚಂದ್ರಯಾನ-3ರ ಯೋಜನೆ ಯಶಸ್ವಿಯಾಗಲೆಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಯುವ ಮೋರ್ಚಾ ತಾಲೂಕು ಅಧ್ಯಕ್ಷರಾದ ಅವಿನಾಶ್. ಪ್ರಧಾನ ಕಾರ್ಯದರ್ಶಿ ಅನಿಲ್ ಎಂ.ವಿ. ಉಪಾಧ್ಯಕ್ಷ ನಯನ ಊರ್ ಬಗ್ಗೆ. ಜಿಲ್ಲಾ ಉಪಾಧ್ಯಕ್ಷ ಸಂಜಯ್. ಜಿಲ್ಲಾ ಎಸ್ ಸಿ ಮೋರ್ಚ ಪ್ರಧಾನ ಕಾರ್ಯದರ್ಶಿ ಜೈಪಾಲ್ ಬಿದರಳ್ಳಿ. ಭಜರಂಗದಳ ತಾಲೂಕು ಸಹ ಸಂಚಾಲಕ್ ಸಂತೋಷ್. ರೋಹಿತ್. ಪ್ರಸಾದ್. ಅವಿನಾಶ್. ವೆಂಕಟೇಶ್.ರಾಕೇಶ್, ಶಶಿಕಾಂತ್. ಇತರರು ಭಾಗವಹಿಸಿದರು.