ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸೂಕ್ತ ನ್ಯಾಯಕ್ಕಾಗಿ ಆಗ್ರಹಿಸಿ ನಿನ್ನೆ ಕಡೂರಿನಲ್ಲಿ ಪ್ರತಿಭಟನೆ ನಡೆಸಲಾಯಿತಿ.
ಕಡೂರು ಪಟ್ಟಣದಲ್ಲಿ ವಿವಿಧ ಸಂಘಟನಗಳಿಂದ ಪ್ರತಿಭಟನಾ ನಡೆಸಲಾಯಿತು. ಪಂಜಿನ ಮೆರವಣಿಗೆ ಮಾಡಿ ಪ್ರತಿಭಟಿಸಲಾಯಿತು.
ನಟ ಧರ್ಮಣ್ಣ ಹಾಗೂ ಜೆಡಿಎಸ್ ಯುವ ನಾಯಕರಾದ ಹರ್ಷಿತ್ ಕಡೂರು ಇವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು ಘಟನೆ ನಡೆದು 12 ವರ್ಷವಾದರೂ ಸೌಜನ್ಯ ಸಾವಿಗೆ ನ್ಯಾಯ ಸಿಕ್ಕಿಲ್ಲ. ಪೊಲೀಸರು ಎಂತೆಂತಹ ಪ್ರಕರಣವನ್ನೆಲ್ಲ ಕಂಡುಹಿಡಿಯುತ್ತಾರೆ. ಆದರೆ ಸೌಜನ್ಯ ಪ್ರಕರಣದ ನಿಜ ಆರೋಪಿಗಳನ್ನು ಯಾಕೆ ಬಂಧಿಸಲು ಸಾಧ್ಯವಾಗಿಲ್ಲ. ಈ ಪ್ರಕರಣವನ್ನು ಸರ್ಕಾರ ಮರುತನಿಖೆ ನಡೆಸಿ ನಿಜವಾದ ಆರೋಪಿಗಳನ್ನು ಪತ್ತೆಹಚ್ಚಬೇಕೆಂದು ಆಗ್ರಹಿಸಿದ್ದಾರೆ.