ಚಿಕ್ಕಮಗಳೂರು ತಾಲೂಕು ಕಚೇರಿಯಲ್ಲಿ ಮರಣ ದೃಢೀಕರಣ ಪತ್ರ ನೀಡಲು ಲಂಚ ಪಡೆಯುತ್ತಿದ್ದ ಇಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಚಿಕ್ಕಮಗಳೂರು ಆದಿಶಕ್ತಿ ನಗರದ ಕೂಲಿ ಕಾರ್ಮಿಕರಾದ ತಾಜ್ ರವರು ತನ್ನ ಪತಿಯ ಮರಣ ದೃಢೀಕರಣ ಪತ್ರ ಕೋರಿ ಅರ್ಜಿ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಲೆಕ್ಕನಿರೀಕ್ಷಕ ಇಕ್ಬಾಲ್ , ಅರ್ಜಿದಾರರಿಗೆ ಕರೆ ಮಾಡಿ ಕಚೇರಿಗೆ ಬರುವಂತೆ ತಿಳಿಸಿ 12,000 ರೂ.ಗಳೊಂದಿಗೆ ದಾಖಲೆ ನೀಡುವಂತೆ ಬೇಡಿಕೆ ಸಲ್ಲಿಸಿದ್ದರು.
ಹಣವನ್ನು ದಾಖಲೆಗಳೊಂದಿಗೆ ಕಂಪ್ಯೂಟರ್ ಆಪರೇಟರ್ ಜೀವನ್ ಬಳಿ ನೀಡುವಂತೆಯೂ ಹೇಳಿದ್ದರು.
ಈ ಬಗ್ಗೆ ನೊಂದ ಮಹಿಳೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ ಧ್ವನಿ ಮುದ್ರಿತ ದಾಖಲೆ ಒದಗಿಸಿದ್ದರು.
ಇಂದು ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ಚಿಕ್ಕಮಗಳೂರು ತಾಲ್ಲೂಕು ಕಛೇರಿಗೆ ದಾಳಿ ನಡೆಸಿ ಹಣ ಪಡೆಯುತ್ತಿದ್ದ ವೇಳೆ ಇಕ್ಬಾಲ್ ಹಾಗೂ ಜೀವನ್ ನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ದಾಳಿಯಲ್ಲಿ ಇನ್ಸ್ಪೆಕ್ಟರ್ ಅನಿಲ್ ರಾಥೋಡ್, ಸಿಬ್ಬಂದಿಗಳಾದ ಸವಿನಯ್ ವಿಜಯ್, ಭಾಸ್ಕರ್, ಸಲ್ಮಾ ಬೇಗಂ, ರವಿ, ಪ್ರಕಾಶ್ ಪಾಲ್ಗೊಂಡಿದ್ದರು.