ಸೆಪ್ಟಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಕಾಫಿ ಸಮ್ಮೇಳನ ನಡೆಯಲಿದೆ. ಅದಕ್ಕಾಗಿ ಈಗಾಗಲೇ ಭರದಿಂದ ತಯಾರಿಗಳು ಸಾಗಿವೆ.
ಭಾರತದ ಕಾಫಿ ಉದ್ದಿಮೆಗೆ ಉತ್ತೇಜನಕಾರಿಯಾಗುವ ನೀರೀಕ್ಷೆ ಇಟ್ಟುಕೊಂಡಿರುವ ಅಂತರಾಷ್ಟ್ರೀಯ ಕಾಫಿ ಸಮ್ಮೇಳನ ನಮ್ಮ ರಾಜ್ಯದಲ್ಲಿ ಸೆಪ್ಟಂಬರ್ 25 ರಿಂದ 28ರವರೆಗೆ ಆಯೋಜನೆಗೊಳ್ಳುತ್ತಿದೆ.
ಕಾಫಿ ಮಂಡಳಿ ಈ ಸಮ್ಮೇಳನ ಆಯೋಜನೆಗೆ ಹೆಚ್ಚಿನ ಮುತುವರ್ಜಿ ವಹಿಸಿದೆ. ಸಮ್ಮೇಳನದ ಲಾಂಛನ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಸಾಂಗ್ರಿಲಾ ಹೋಟೆಲ್ ನಲ್ಲಿ ನೆರವೇರಿತು. ಲಾಂಛನವನ್ನು ಭಾರತದ ನಂಬರ್ ಒನ್ ಟೆನ್ನಿಸ್ ಆಟಗಾರರಾದ ರೋಹನ್ ಬೋಪಣ್ಣ ನವರು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಕಾಫಿ ಉದ್ದಿಮೆಯ ವಿವಿಧ ಸಂಘಟನೆಗಳು ಭಾಗವಹಿಸಿದ್ದರು. ಕರ್ನಾಟಕ ಬೆಳೆಗಾರರ ಒಕ್ಕೂಟದಿಂದ ಅಧ್ಯಕ್ಷರಾದ ಡಾ.ಹೆಚ್.ಟಿ.ಮೋಹನ್ ಕುಮಾರ್, ನಿರ್ದೇಶಕರುಗಳಾದ ಬಿ .ಜಿ .ಯತೀಶ್ , ಕೆ.ಹೆಚ್ .ಬಸವರಾಜು ಪಾಲ್ಗೊಂಡಿದ್ದರು.