ಸಂಚಾರ ನಿಯಮ ಉಲ್ಲಂಘನೆ ಮಾಡಿದ ಪ್ರಕರಣಗಳಿಗೆ ವಿಧಿಸಿಲಾದ ದಂಡದಲ್ಲಿ ಶೇ 50 ರಿಯಾಯಿತಿ ನೀಡಿ ಸರ್ಕಾರ ಆದೇಸಿದೆ. ಫೆಬ್ರುವರಿ 11 ರ ಹಿಂದಿನ ಪ್ರಕರಣಗಳಿಗಷ್ಟೇ ಈ ಆದೇಶ ಅನ್ವಯವಾಗಲಿದೆ.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿರುವ ಹೈಕೋರ್ಟ್ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಜೂನ್ ತಿಂಗಳಲ್ಲಿ ಸಭೆ ನಡೆದಿತ್ತು. ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ನಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ದಂಡದ ಮೊತ್ತಕ್ಕೆ ರಿಯಾಯಿತಿ ನೀಡುವಂತೆ ಕೋರಲಾಗಿತ್ತು. ಇದನ್ನು ಪರಿಗಣಿಸಿರುವ ಸಾರಿಗೆ ಇಲಾಖೆಯು ದಂಡದ ಮೊತ್ತ ಶೇ 50ರಷ್ಟು ಮಾತ್ರ ಪಡೆಯಲು ಆದೇಶಿಸಿದೆ.ದಂಡದ ಮೊತ್ತದ ಅರ್ಧದಷ್ಟನ್ನು ಸೆಪ್ಟೆಂಬರ್ 9ರ ಒಳಗೆ ಪಾವತಿಸಿ,ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಆದೇಶ ಹೇಳಿದೆ.