ಮೂಡಿಗೆರೆ ರೋಟರಿ ಕ್ಲಬ್ ಮತ್ತು ಮಲೆನಾಡು ಗ್ಯಾರೇಜ್ ಮಾಲೀಕರ, ಕಾರ್ಮಿಕರ ಸಂಘ, ಮೂಡಿಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಟಿ.ಟಿ. ಚುಚ್ಚುಮದ್ದು ಮತ್ತು ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.
ಶಿಬಿರವನ್ನು ಹಿರಿಯ ರೋಟರಿ ಸದಸ್ಯ ಎನ್.ಎನ್. ಪ್ರಸನ್ನ ಕುಮಾರ್ ಉದ್ಘಾಟಿಸಿದರು. ಎಂ.ಜಿ. ಎಂ. ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಶಾಂಭವಿ ಅವರು ಮಾತನಾಡಿ ಪ್ರತಿಯೊಬ್ಬರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರೇ ಅನೇಕ ಆರೋಗ್ಯ ಸಮಸ್ಯೆಗಳಿಗೆ ಮುಂಚಿತವಾಗಿ ಚಿಕಿತ್ಸೆ ಪಡೆಯಬಹುದು, ಟಿ.ಟಿ. ಚುಚ್ಚುಮದ್ದು ಹಾಕಿಸಿಕೊಳ್ಳುವುದರಿಂದ ತುಕ್ಕುಹಿಡಿದ ಲೋಹಗಳಿಂದ ಆಗುವ ಗಾಯಗಳು ಉಲ್ಬಣವಾಗದಂತೆ ರಕ್ಷಣೆ ನೀಡುತ್ತದೆ. ಈಗ ಸರ್ಕಾರದ ವತಿಯಿಂದ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಅನೇಕ ಯೋಜನೆಗಳು ಇವೆ. ಅವುಗಳನ್ನು ಎಲ್ಲರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡಿಗೆರೆ ರೋಟರಿ ಅಧ್ಯಕ್ಷರಾದ ಹೆಚ್.ಆರ್.ಪ್ರದೀಪ್ ದುಂಡುಗ ವಹಿಸಿದ್ದರು. ಮಲೆನಾಡು ಗ್ಯಾರೇಜ್ ಮಾಲೀಕರ ಮತ್ತು ಕಾರ್ಮಿಕರ ಸಂಘದ ಅಧ್ಯಕ್ಷ ಫ್ರಾನ್ಸಿಸ್, ರೋಟರಿ ವಲಯಾಧಿಕಾರಿ ವಿನೋದ್ ಕುಮಾರ್ ಶೆಟ್ಟಿ, ಸದಸ್ಯರಾದ ಕೆ.ಎಲ್.ಎಸ್. ತೇಜಸ್ವಿ, ನರೇಂದ್ರ ಶೆಟ್ಟಿ, ಹೆಚ್.ಕೆ. ಯೋಗೇಶ್, ಡಾ. ಜೀವನ್ ಕಲಾಮೆ, ವರುಣ್ ಬಿ., ಎಂ.ಜಿ. ಆಸ್ಪತ್ರೆಯ ವೈದ್ಯರುಗಳು ಉಪಸ್ಥಿತರಿದ್ದರು.
ಶಿಬಿರದಲ್ಲಿ ಸುಮಾರು 70 ಮಂದಿ ಗ್ಯಾರೇಜ್ ಮಾಲೀಕರು ಮತ್ತು ಕಾರ್ಮಿಕರು ಟಿ.ಟಿ.ಚುಚ್ಚುಮದ್ದು ಪಡೆದರು, ಸುಮಾರು 100ಕ್ಕೂ ಅಧಿಕ ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಇದೇ ಸಂದರ್ಭದಲ್ಲಿ ಆಭಾ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಯಿತು.
ನಿರಂತರ ಸುದ್ದಿಗಳಿಗೆ ದರ್ಪಣ ನ್ಯೂಸ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ
https://chat.whatsapp.com/IkFCXal7O5ODMBHsmKv9ak