ಪಿ.ಎಂ.ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಮುಂದಿನ ದಿನಗಳಲ್ಲಿ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಆರ್ಥಿಕ ನೆರವು ವರ್ಗಾವಣೆ ಯಾಗಬೇಕಾದರೆ *e – KYC* ಮಾಡಿಸುವುದು ಕಡ್ಡಾಯವಾಗಿರುತ್ತದೆ. ಆದುದರಿಂದ ಎಲ್ಲಾ ರೈತರು ತಪ್ಪದೆ e -KYC ಯನ್ನು ಮಾಡಿಸಬೇಕು. ಈ -KYC ಯನ್ನು ದಿನಾಂಕ 30.06.2023 ರ ಒಳಗೆ ಮಾಡಿಸದಿದ್ದರೆ ಮುಂದಿನ ಯಾವುದೇ ಆರ್ಥಿಕ ಸೌಲಭ್ಯ ಸಿಗುವುದಿಲ್ಲ.
ಆದುದರಿಂದ ರೈತರು e – KYC ಯನ್ನು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಓಟಿಪಿ ಆಧಾರಿತ ಅಥವಾ ಬಯೋಮೆಟ್ರಿಕ್ ಆಧಾರಿತ e – KYC ಯನ್ನು ಮಾಡಿಸಿಕೊಳ್ಳಲು ಈ ಮೂಲಕ ಸೂಚಿಸಲಾಗಿದೆ.
ಇ-ಕೆವೈಸಿಯನ್ನು ಮಾಡಿಸಲು ಬೇಕಾಗಿರುವ ದಾಖಲಾತಿ
• ಆಧಾರ್ ಕಾರ್ಡ್
• ಆಧಾರ್ ಕಾರ್ಡ್ಗೆ ಜೋಡನೆಯಾಗಿರುವ ಮೋಬೈಲ್ ಸಂಖ್ಯೆ
ಆಧಾರ್ ಕಾರ್ಡಿಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ ಇಲ್ಲದಿರುವ ರೈತರು ಹೆಬ್ಬೆಟ್ಟಿನ ಹಚ್ಚು ಕೊಡುವುದರ ಮೂಲಕ ಈ ಕೆ ವೈ ಸಿ ಯನ್ನು ಮಾಡಿಸಬಹುದು
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ಎಂದು ವೆಂಕಟೇಶ್ ಎಂ ಆರ್ ಕೃಷಿ ಅಧಿಕಾರಿ, ಬಣಕಲ್ ಇವರು ಪತ್ರಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ..
ಬಣಕಲ್ ಹೋಬಳಿ ವ್ಯಾಪ್ತಿಯಲ್ಲಿ e-kyc ಮಾಡಿಸಲು ಬಾಕಿ ಇರುವ ರೈತರ ಪಟ್ಟಿ ಈ ಕೆಳಗಿನಂತಿದೆ