ಮೂಡಿಗೆರೆ ತಾಲ್ಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಶನಿವಾರ ಪಟ್ಟಣದ ಪತ್ರಿಕಾ ಭವನದಲ್ಲಿ ನಡೆಯಿತು.
ಸಂಘದ ನೂತನ ಅಧ್ಯಕ್ಷರಾಗಿ ಹೊಸ ದಿಗಂತ ಪತ್ರಿಕೆ ವರದಿಗಾರ ಆನಂದ್ ಕಣಚೂರು, ಉಪಾಧ್ಯಕ್ಷರಾಗಿ ತನು ಕೊಟ್ಟಿಗೆಹಾರ, ಕಾರ್ಯದರ್ಶಿಯಾಗಿ ಯು.ಆರ್. ಶಿವಕಾಶಿ, ಖಜಾಂಚಿಯಾಗಿ ವಿಜಯ್ ಕುಮಾರ್ ಅವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಪ್ರಸನ್ನ ಗೌಡಹಳ್ಳಿ, ಉದಯಶಂಕರ್, ಎಂ.ಹೆಚ್.ಅಮರನಾಥ್, ಪ್ರಸನ್ನ ಕುಮಾರ್, ನಯನ ತಳವಾರ, ನಂದೀಶ್ ಬಂಕೇನಹಳ್ಳಿ, ಸಂತೋಷ್ ಅತ್ತಿಗೆರೆ, ಅನಿಲ್ ಮೊಂತೆರೋ, ಉಮಾಶಂಕರ್, ಪ್ರಸನ್ನ ತಳವಾರ, ಸೋಮಶೇಖರ್, ಶಾರದಾ, ಗಣೇಶ್ ಮಗ್ಗಲಮಕ್ಕಿ, ಪ್ರವೀಣ್ ಪೂಜಾರಿ, ಉಮಾಶಂಕರ್, ಬಿ.ಪಿ.ಪ್ರಕಾಶ್, ಕಿರಣ್ ಬೆಟ್ಟಗೆರೆ, ಸಂತೋಷ್ ಹಂಡುಗುಳಿ, ಸೈಯದ್, ಮನ್ಸೂರ್ ಉಪಸ್ಥಿತರಿದ್ದರು.