ಕಾರು ಮತ್ತು ಟಿ ಟಿ ಗಾಡಿ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮತಿಘಟ್ಟ ಕ್ರಾಸ್ ಬಳಿ ದುರ್ಘಟನೆ ನಡೆದಿದೆ.
ಕೇರಳ ಮೂಲದ ಟಿಟಿ ಗಾಡಿ ಹಾಗೂ ಹೊನ್ನಾವರ ಮೂಲದ ರಿಡ್ಜ್ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಅಪಘಾತದಲ್ಲಿ ಕಾರಿನಲ್ಲಿದ್ದ ಮೂರು ವರ್ಷದ ಮಗು ಹಾಗೂ ಓರ್ವ ಪುರುಷ ವೃತಪಟ್ಟಿರುತ್ತಾರೆ. ಮೃತ ಪುರುಷ 46 ವರ್ಷದ ಗಿರಿಧರ್ ಎಂದು ಗುರುತಿಸಲಾಗಿದೆ.
ಟಿಟಿ ಗಾಡಿಯಲ್ಲಿದ್ದ ಕೇರಳ ಮೂಲದ ಏಳು ಮಂದಿಗೆ ಗಾಯಗಳಾಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಿಟಿ ಗಾಡಿಯಲ್ಲಿ ಕೇರಳ ಮೂಲದವರು ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಪ್ರವಾಸಕ್ಕೆ ಬಂದಿದ್ದರು ಎಂದು ಹೇಳಲಾಗಿದೆ ಕಾರಿನಲ್ಲಿದ್ದವರು ಹೊನ್ನಾವರದಿಂದ ವಿವಾಹ ಸಮಾರಂಭ ಒಂದಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.