ಕರ್ನಾಟಕ ವಿಧಾನಸಭಾ ಚುನಾವಣೆ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.
ರಾಜ್ಯದ 224 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಮತದಾರರು ಸಂಭ್ರಮದಿಂದ ಮತಚಲಾಯಿಸಿದರು.
ರಾಜ್ಯದಲ್ಲಿ ಒಟ್ಟಾರೆ ಶೇಕಡ 65-68 ಮತದಾನವಾಗಿದೆ ಎಂದು ಅಂದಾಜಿಸಲಾಗಿದೆ. ನಿಖರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕು.
ಮೂಡಿಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 1,33,827 ಮತಗಳು ಚಲಾವಣೆಯಾಗಿವೆ ಎಂದು ತಿಳಿದುಬಂದಿದೆ. ಜಿಲ್ಲೆಯ ಉಳಿದ ಕ್ಚೇತ್ರಗಳ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಇಂದಿನ ಮತದಾ ಅನೇಕ ಸ್ವಾರಸ್ಯಕರ ಸಂಗತಿಗಳಿಗೆ ಸಾಕ್ಷಿಯಾಗಿದೆ. ಶತಾಯುಷಿಗಳು, ವಿಶೇಷ ಚೇತನರು, ಹೊಸಮತದಾರರು, ಹಸೆಮಣೆ ಏರಲು ಸಜ್ಜಾದವರು ಹೀಗೆ ರಾಜ್ಯದ ನಾನಾ ಭಾಗಗಳಿಂದ ಚುನಾವಣೆಯ ವಿಶೇಷ ಚಿತ್ರಣಗಳು ಕಂಡುಬಂದಿವೆ.
ಮೂಡಿಗೆರೆ ಕ್ಷೇತ್ರದ ಮಾಕೋನಹಳ್ಳಿ ಮತಕೇಂದ್ರದಲ್ಲಿ ಮಧುಮಗಳು ಸುಶ್ಮಿತಾ ಮತದಾನ ಮಾಡಿ ಹಸೆಮಣೆಯೇರಲು ತೆರಳಿದ್ದು ಗಮನಸೆಳೆಯಿತು.
ಚಿಕ್ಕಮಗಳೂರು ನಗರದ ಮತಕೇಂದ್ರವೊಂದರಲ್ಲಿ ಕಾಂಗ್ರೇಸ್ ಅಭ್ಯರ್ಥಿ ಹೆಚ್.ಡಿ.ತಮ್ಮಯ್ಯ ಮತ್ತು ನಗರಸಭೆ ಅಧ್ಯಕ್ಷ ಬಿ.ಜೆ.ಪಿ.ಯ ವರಸಿದ್ದಿ ವೇಣುಗೋಪಾಲ್ ನಡುವೆ ಮಾತಿನ ಚಕಮಕಿ ನಡೆದಿದೆ.
ಇಂದು ಅನೇಕ ಮಾಧ್ಯಮ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿದ್ದು ಬಹುತೇಕ ಸಮೀಕ್ಷೆಗಳು ಕಾಂಗ್ರೇಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂದು ಹೇಳಿವೆ.
ಒಟ್ಟಾರೆ ರಾಷ್ಟ್ರದ ಗಮನ ಸೆಳೆದಿರುವ ಚುನಾವಣೆ ಮುಗಿದಿದ್ದು ಶನಿವಾರ ಫಲಿತಾಂಶ ಪ್ರಕಟವಾಗಲಿದ್ದು, ಫಲಿತಾಂಶದ ಬಗ್ಗೆ ತೀವ್ರ ಕುತೂಹಲ ಏರ್ಪಟ್ಟಿದೆ.