October 5, 2024

ನಾಮಿನಿ ಸದಸ್ಯರು ಎಂಎಲ್‍ಸಿ ಚುನಾವಣೆಯಲ್ಲಿ ಮತದಾನ ಮಾಡಬಹುದೇ ಅಥವಾ ಇಲ್ಲವೇ ಎಂಬ ಮೊಕದ್ದಮೆಗೆ ಘನ ನ್ಯಾಯಾಲಯ ತನ್ನ ತೀರ್ಪು ನೀಡಿದೆಯೇ ಹೊರತು ತನ್ನ ವಿಧಾನ ಪರಿಷತ್ ಸದಸ್ಯತ್ವದ ಬಗ್ಗೆ ತೀರ್ಪಿನಲ್ಲಿ ಯಾವುದೇ ಉಲ್ಲೇಖ ಮಾಡಿರುವುದಿಲ್ಲ. ವಿರೋಧ ಪಕ್ಷದ ಪುಕಾರಿಗೆ ಯಾರೂ ಆತಂಕಕ್ಕೊಳಪಡಬೇಕಾಗಿಲ್ಲ ಎಂದು ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

ಗುರುವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ನಾಮಿನಿ ಸದಸ್ಯರು ಮತದಾನ ಮಾಡಬಾರದು ಎಂದು ನ್ಯಾಯಾಲಯದ ಏಕ ಸದಸ್ಯ ಪೀಠವು ದಾವೆವೊಂದರಲ್ಲಿ ತೀರ್ಪು ನೀಡಿದ್ದು, ಇದನ್ನು ಹೈಕೋರ್ಟ್‍ನ ದ್ವಿಸದಸ್ಯ ಪೀಠವು ಎತ್ತಿ ಹಿಡಿದಿದೆ. ಈ ತೀರ್ಪನ್ನು ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನಿಸುವ ಅವಕಾಶ ಕೂಡ ಇದೆ. ಮುಂದುವರೆದು ಚುನಾವಣಾ ಆಯೋಗ ಸಲ್ಲಿಸಿರುವ ತಕರಾರು, ಇನ್ನೂ ನ್ಯಾಯಾಲಯದ ಕಟಕಟೆಗೆ ಬಂದಿರುವುದಿಲ್ಲ. ಇದು ಜೂ.9ರಂದು ನ್ಯಾಯಾಲಯದ ಕಲಾಪಕ್ಕೆ ಬರಲಿದ್ದು, ಅಲ್ಲಿ ವಾದ ವಿವಾಧ ನಡೆದು ಅದರ ಆದೇಶ ಏನೆಂದು ಪರಿಶೀಲಿಸಬೇಕು. ಈ ಪ್ರಕರಣ ಇನ್ನೂ ಕೇವಲ ಕೋರ್ಟ್ ಸಮನ್ಸ್ ಹಂತದಲ್ಲಿದ್ದು, ಸ್ಪಷ್ಟ ತೀರ್ಪು ಆಗಮಿಸಲು ಹಲವಾರು ಸಮಯ ತಗುಲಲಿದೆ.

ಆ ಸಂದರ್ಭದಲ್ಲಿ ಘನ ನ್ಯಾಯಾಲಯ ಗುಪ್ತ ಮತದಾನದ ಮರು ಎಣಿಕೆ ಅಥವಾ ಮರು ಮತದಾನ ಎಂಬುದರ ಬಗ್ಗೆ ತೀರ್ಮಾನ ಆಗಬೇಕಿದೆ. ತನ್ನ ವಿಧಾನ ಪರಿಷತ್ ಸದಸ್ಯತ್ವದ ಬಗ್ಗೆ ಆನಂತರ ತೀರ್ಮಾನವಾಗಲಿದೆ. ನ್ಯಾಯಾಲಯದ ಅಂತಿಮ ತಿರ್ಪಿಗೆ ನಾನು ಬದ್ಧನಾಗಿದ್ದೇನೆ. 1997ರಿಂದಲೂ ಎಲ್ಲಾ ಸರಕಾರದ ಅವದಿಯಲ್ಲಿ ನಾಮಿನಿ ಸದಸ್ಯರು ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ. ಆದರೆ ನನ್ನ ಚುನಾವಣೆ ವಿಚಾರವನ್ನಿಟ್ಟುಕೊಂಡು ವಿರೋಧ ಪಕ್ಷದವರು ಚುನಾವಣೆ ಸಂದರ್ಭದಲ್ಲಿ ತಾವೇ ಗೆದ್ದಿದ್ದೇವೆಂದು ಅಪ ಪ್ರಚಾರ ಮಾಡುತ್ತಿದ್ದಾರೆ. ವಿರೋಧ ಪಕ್ಷದ ಅಪ ಪ್ರಚಾರಕ್ಕೆ ತಕ್ಕ ಉತ್ತರ ಪ್ರಬುದ್ಧ ಮತದಾರರು ನೀಡಲಿದ್ದಾರೆಂದು ತಿಳಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ