ಕಾಫಿ ಪಲ್ಪರ್ ತ್ಯಾಜ್ಯ ನೀರನ್ನು ಜಲಮೂಲಗಳಿಗೆ ಬಿಡುವ ಬೇಜವ್ದಾರಿತನವನ್ನು ಕೆಲವು ಎಸ್ಟೇಟ್ ಮಾಲೀಕರು ಮುಂದುವರಿಸಿದ್ದಾರೆ.
ಮೂಡಿಗೆರೆ ಸಕಲೇಶಪುರ ಗಡಿಭಾಗದಲ್ಲಿ ಹರಿಯುತ್ತಿರುವ ಜಪಾವತಿ ನದಿಗೆ ಕಾಫಿ ಪಲ್ಪರ್ ನೀರು ಬಿಟ್ಟಿರುವ ಪರಿಣಾಮ ನದಿನೀರು ಕಪ್ಪಾಗಿ ಹರಿಯುತ್ತಿದೆ.
ಈ ಬಗ್ಗೆ ಸ್ಥಳೀಯ ಪೂರ್ಣೇಶ್ ಅವರು ವಿಡಿಯೋ ಮಾಡಿ ಗಮನಸೆಳೆದಿದ್ದಾರೆ.
ಈಗ್ಗೆ ಕೆಲ ದಿನಗಳ ಹಿಂದೆ ಹೇಮಾವತಿ ನದಿಗೂ ಇದೇ ರೀತಿ ತ್ಯಾಜ್ಯ ನೀರನ್ನು ಬಿಡಲಾಗಿತ್ತು.
ಈ ಬಗ್ಗೆ ಕ್ರಮ ಜರುಗಿಸಬೇಕಾದ ಇಲಾಖೆಗಳು ಮತ್ತು ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತಂತಿದೆ.