ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಪಕ್ಷದ ನೂತನ ಪದಾಧಿಕಾರಿಗಳನ್ನು ಗುರುವಾರ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಕ್ಷೆತ್ರ ಸಮತಿ ಅಧ್ಯಕ್ಷ ಡಿ.ಜೆ.ಸುರೇಶ್ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.
ಕ್ಷೇತ್ರ ಸಮಿತಿ ಅಧ್ಯಕ್ಷರಾಗಿ ಡಿ.ಜೆ.ಸುರೇಶ್ ಅವರನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಗಿದೆ.
ಕಾರ್ಯಧ್ಯಕ್ಷರಾಗಿ ಎಂ.ಕೆ.ರವಿ ಮಗ್ಗಲಮಕ್ಕಿ, ಉಪೇಂದ್ರ ಬೆಟ್ಟಗೆರೆ, ಶಾಕಿರ್ ಹುಸೇನ್ ಗುಲ್ಲನಪೇಟೆ, ಲಕ್ಷ್ಮಣ್ ಹುಣಸೇಮಕ್ಕಿ, ಮಹೇಶ್ ಬೆಳಗೂಡು, ಉಪಾಧ್ಯಕ್ಷರಾಗಿ ಪ್ರದೀಪ್ ಮುಗುಳುವಳ್ಳಿ, ರಾಮಚಂದ್ರೆಗೌಡ ಗೋಣಿಬೀಡು, ಪುಟ್ಟಸ್ವಾಮಿ ಹಾರ್ಜಹಳ್ಳಿ, ಮಹಮ್ಮದ್ ನೂರುಲ್ಲಾ ಮೂಡಿಗೆರೆ, ಲಕ್ಷ್ಮಣ್ಗೌಡ ಬಾಳೂರು, ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಲೋಹಿತ್ ಬಿದರಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ರವಿಗೌಡ ವಸ್ತಾರೆ, ಪರಮೇಶ್ ಮಳಲೂರು, ಪ್ರಸಾಧ್ ಬಕ್ಕಿ, ಕುಮಾರ್ ಹರಿಹರದಹಳ್ಳಿ, ಸಹಕಾರ್ಯದರ್ಶಿಯಾಗಿ ಸೋಮಣ್ಣ ಸಿರ್ಗಾಪುರ, ಕರಿಯಪ್ಪ ತಳವಾರ, ಜೋರೋಮ್ ನೋರೋನ್ನ ಅವರನ್ನು ಆಯ್ಕೆ ಮಾಡಲಾಯಿತು.
ಮೂಡಿಗೆರೆ ಕ್ಷೇತ್ರ ಸಮಿತಿಯ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ನಾಸೀರ್ ಹುಸೇನ್ ಬಿಳಗುಳ, ಯುವ ವಿಭಾಗದ ಅಧ್ಯಕ್ಷರಾಗಿ ಸಂಪತ್ ಪಟ್ಟದೂರು, ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ರಾಜಶೇಖರ್ ಪಲ್ಗುಣಿ, ಮಹಿಳಾ ವಿಭಾಗದ ಆಧ್ಯಕ್ಷರಾಗಿ ಸುಮಾ ನಾಗೇಶ್ ಅಂಬಳೆ ಕೆ.ಆರ್.ಪೇಟೆ, ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷರಾಗಿ ವಿಜೇಂದ್ರ ಅಣಜೂರು, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾಗಿ ಸಿದ್ದೇಶ್ ಕೆಸವೊಳಲು, ರೈತ ವಿಭಾಗದ ಅಧ್ಯಕ್ಷರಾಗಿ ಸುರೇಂದ್ರ ಹ್ಯಾರಗುಡ್ಡೆ, ಕಾನೂನು ವಿಭಾಗದ ಅಧ್ಯಕ್ಷರಾಗಿ ಜಗದೀಶ್ ಅವರನ್ನು ಆಯ್ಕೆ ಮಾಡಲಾಯಿತು.