ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದ ಯುವಕನೋರ್ವ ಕೊಟ್ಟಿಗೆಹಾರದಿಂದ ಕಣ್ಮರೆಯಾಗಿದ್ದಾನೆ.
ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ತಿಮ್ಲಾಪುರ ಗ್ರಾಮದ ಯುವಕ 22 ವರ್ಷದ ಲವ ಕಾಣೆಯಾಗಿರುವ ಯುವಕ.
ಯುವಕ ಭಾಗಶಃ ಬುದ್ಧಿಮಾಂದ್ಯನಾಗಿದ್ದು ತನ್ನ ಕುಟುಂಬ ಹಾಗೂ ಇತರೆ 50 ಜನರ ತಂಡದೊಂದಿಗೆ ಪಾದಯಾತ್ರೆಯಲ್ಲಿ ಸಾಗುವಾಗ ತಂಡದಿಂದ ಬೇರ್ಪಟ್ಟಿದ್ದಾನೆ. ನಂತರ ಆತನ ಸುಳಿವು ಸಿಕ್ಕಿಲ್ಲ. ಯುವಕ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಯುವಕನ ಸುಳಿವು ಕೊಟ್ಟವರಿಗೆ ರೂ. 5000-00 ಬಹುಮಾನ ನೀಡುವುದಾಗಿ ಪೋಷಕರು ಘೋಷಣೆ ಮಾಡಿದ್ದಾರೆ.
ಈ ಯುವಕನ ಬಗ್ಗೆ ಸುಳಿವು ಸಿಕ್ಕಲ್ಲಿ ಬಣಕಲ್ ಪೊಲೀಸ್ ಠಾಣೆಗೆ ಅಥವಾ ಸಮೀಪದ ಯಾವುದೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ಕೋರಲಾಗಿದೆ.