ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಸಮೀಪ ಈ ದುರ್ಘಟನೆ ನಡೆದಿದೆ.
ಅಪಘಾತದಲ್ಲಿ ಶಿವನಿ ಮೆಸ್ಕಾಂ ಜೂನಿಯರ್ ಇಂಜಿನಿಯರ್ (ಜೆ.ಇ.) ಕಿರಣ್ ಗೌಡ ( 32 ವರ್ಷ) ಮತ್ತು ನಾಗರಾಜು (40 ವರ್ಷ) ಸಾವನ್ನಪ್ಪಿದ್ದಾರೆ.
ಅಜ್ಜಂಪುರ ತಾಲ್ಲೂಕಿನ ಮಾಕನಹಳ್ಳಿ ಬಳಿ ಕಾರು ಮರಕ್ಕೆ ಡಿಕ್ಕೆ ಹೊಡೆದು ನಜ್ಜುಗುಜ್ಜಾಗಿದೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ಮೂಲದ ಕಿರಣ್ ಶಿವನಿ ಮೆಸ್ಕಾಂ ಉಪವಿಭಾಗದಲ್ಲಿ ಕಿರಿಯ ಅಭಿಯಂತರರಾಗಿದ್ದರು. ಇದೇ ಫೆಬ್ರವರಿ 8ರಂದು ಅವರ ವಿವಾಹ ನಿಶ್ಚಯವಾಗಿತ್ತು ಎಂದು ತಿಳಿದುಬಂದಿದೆ.
ನಾಗರಾಜು ಶಿವನಿ ಮೂಲದವರು ಎಂದು ತಿಳಿದು ಬಂದಿದೆ.