ಗ್ರಾಮೀಣ ಪ್ರದೇಶದಲ್ಲಿ ಅಳಿದುಳಿದಿರುವ ಜಾನಪದ ಸೊಗಡು, ಕಲೆ ಮತ್ತು ಸಂಸ್ಕøತಿಯನ್ನು ಉಳಿಸುವ ಜವಾಬ್ದಾರಿ ತಮ್ಮೆಲ್ಲರ ಮೇಲಿದೆ ಎಂದು ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಎಸ್.ಎಚ್.ಪೂರ್ಣೇಶ್ ಹೇಳಿದರು.
ಅವರು ಇತ್ತೀಚೆಗೆ ಮೂಡಿಗೆರೆ ತಾಲೂಕಿನ ಬಿಳಗುಳದ ನೇತಾಜಿ ರಂಗಮಂದಿರದಲ್ಲಿ ಏರ್ಪಡಿಸಿದ್ದ ಕನ್ನಡ ಜಾನಪದ ಪರಿಷತ್ತು ಕಸಬಾ ಹೋಬಳಿ ಘಟಕದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಪೂರ್ವಜರು ಜಾನಪದವನ್ನು ಮೈಗೂಡಿಸಿಕೊಂಡಿದ್ದರಿಂದ ಆರೋಗ್ಯವಂತ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿತ್ತು. ಆದರೆ ಪ್ರಸಕ್ತ ಕಾಲದಲ್ಲಿ ಜಾನಪದ ಸೊಗಡು ವಿನಾಶದಂಚಿನಲ್ಲಿ ಸಾಗಿದೆ. ಹಾಗಾಗಿ ಮರೆಯಾಗುತ್ತಿರುವ ಜಾನಪದ ಸೊಗಡನ್ನು ಮತ್ತೆ ಮುಖ್ಯವಾಹಿಸಿಗೆ ತರಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕೆಂದು ಮನವಿ ಮಾಡಿದರು.
ಸುಧಾ ಮಂಜುನಾಥ್ ಅವರು, ಕನ್ನಡ ಜಾನಪದ ಪರಿಷತ್ತಿನ ಕಸಬಾ ಹೋಬಳಿಯ ನೂತನ ಅಧ್ಯಕ್ಷೆಯಾಗಿ ಪದವಿ ಸ್ವೀಕರಿಸಿ ಮಾತನಾಡಿ, ಜಾನಪದ ಕಲೆ ಹಾಗೂ ಸಂಸ್ಕøತಿಯನ್ನು ಉಳಿಸಿ ಬೆಳೆಸುವಲ್ಲಿ ತಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷೆ ಹೆಚ್.ಟಿ. ಭಾನುಮತಿ ವಹಿಸಿದ್ದರು. ಹೆಸಗಲ್ ಗ್ರಾ.ಪಂ. ಅಧ್ಯಕ್ಷೆ ನಂದಾ ಕೃಷ್ಣಮೂರ್ತಿ, ಕಸಾಪ ಅಧ್ಯಕ್ಷ ಶಾಂತಕುಮಾರ್, ಬಿಇಒ ಹೇಮಂತ್ರಾಜ್, ಕಮಲಾಕ್ಷಮ್ಮ, ಎಂ. ಹೆಚ್. ಅಮರನಾಥ್, ಡಿ.ಎಸ್. ಪ್ರಸನ್ನಗೌಡ, ಗಣೇಶ್ ಮಗ್ಗಲಮಕ್ಕಿ, ಹಸೇನಾರ್, ಚಂದ್ರು ಒಡೆಯರ್ ಮತ್ತಿತರರಿದ್ದರು.